ಕುಂದಾಪುರ: ಭಾನುವಾರ ಕಬ್ಬಡಿ ಪಂದ್ಯಾಟದ ವೇಳೆ ಇನ್ನೊಂದು ಕೋಮಿನ ತಂಡದವರಿಂದ ಹಲ್ಲೆಗೊಳಗಾದ ಬಸ್ರೂರು ಶಾರದ ಕಾಲೇಜಿನ ತ್ರತೀಯ ಬಿ.ಬಿ.ಎಂ. ವಿದ್ಯಾರ್ಥಿ, ಎಬಿವಿಪಿ ಕಾರ್ಯಕರ್ತ ಸಚಿನ್ ಮೇಲಿನ ಹಲ್ಲೆಯನು ಖಂಡಿಸಿ ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಬಸ್ರೂರು ಶಾರದಾ ಕಾಲೇಜು ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಎಬಿವಿಪಿ ಜಿಲ್ಲಾಧ್ಯಕ್ಷ ಕಿರಣ ವಕ್ವಾಡಿ ಹಾಗೂ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಸುಧೀರ್ ಶೆಟ್ಟಿ ಈ ವೇಳೆ ಮಾತನಾಡಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿದರು.