ಸುರತ್ಕಲ್,ನ.10 : ಬೈಕಂಪಾಡಿಯಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಬೇಕಾಗಿದ್ದ ಒಂದು ಕಾರ್ಯಕ್ರಮದ ಸಂದರ್ಭ ಎರಡು ಗುಂಪುಗಳ ಮಧ್ಯೆ ನಡೆಯುತ್ತಿದ್ದ ಹ್ಯೊ ಕೈ ಪೊಲೀಸರ ಮಧ್ಯೆಪ್ರವೇಶಿಸಿದ ಕಾರಣ ತಿಳಿಯಾಗಿದ್ದು ಅಲ್ಲಿ ಸೇರಿದ್ದವರನ್ನು ಪೊಲೀಸರು ಚದುರಿಸಿದರು.
ಸತೀಶ್ ಬೈಕಂಪಾಡಿ ಬಂಧನ ಪ್ರಕರಣದ ಬಗ್ಗೆ ತಾನು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಪತ್ರಿಕಾಗೋಷ್ಠಿ ಕರೆದಿದ್ದು ಅದಕ್ಕೆ ಮೊದಲೇ ಕೆಲವು ಅನಪೇಕ್ಷಿತ ವ್ಯಕ್ತಿಗಳು ಅಲ್ಲಿ ಸೇರಿ ಗೊಂದಲ ಎಬ್ಬಿಸಿದ ಕಾರಣ ಪತ್ರಿಕಾಗೋಷ್ಠಿ ರದ್ದುಪಡಿಸಲಾಯಿತು ಎಂದು ಪತ್ರಿಕಾಗೋಷ್ಠಿ ಕರೆದಿದ್ದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ತಿಳಿಸಿದರು.
ಈ ಬಗ್ಗೆ ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದು, ಸ್ಥಳಕ್ಕೆ ಪಣಂಬೂರು ಎಸಿಪಿ ರವಿ ಕುಮಾರ್, ಸುರತ್ಕಲ್ ಠಾಣಾಧಿಕಾರಿ ಎಂ. ಎ. ನಟರಾಜ್, ಪಣಂಬೂರು ಪಿಐ ಎ. ಸಿ. ಲೋಕೇಶ್ ಮೊದಲಾದವರು ಬಂದೋಬಸ್ತ್ ಆಯೋಜಿಸಿದ್ದರು