ಕರಾವಳಿ

ಕೊಲ್ಲೂರಿನಲ್ಲಿ ಸಚಿವರಿಂದ ಒಳಚರಂಡಿ ಮತ್ತು ನೀರಾವರಿ ಯೋಜನೆಗೆ ಹಸಿರು ನಿಶಾನೆ

Pinterest LinkedIn Tumblr
ಕುಂದಾಪುರ:  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
H.K. patil_Visit_Kolluru H.K. patil_Visit_Kolluru (1)
H.k Patil_Visit_Koluru Temple H.k Patil_Visit_Koluru Temple (1)
ಕೊಲ್ಲೂರಿನ ಬಹು ದಿನದ ಬೇಡಿಕೆಯಾದ ಒಳ ಚರಂಡಿ ಮತ್ತು ನೀರಾವರಿ ಯೋಜನೆಗಳನ್ನು ಅತೀ ಶೀಘ್ರವಾಗಿ ಜಾರಿಗೊಳಿಸಿ, ಕೊಲ್ಲೂರಿನ ಪರಿಸರವನ್ನು ಮಲೀನ ಮುಕ್ತ ಮಾಡಬೇಕಾಗಿ  ಊರ ನಾಗರಿಕರು ಈ ಸಂದರ್ಭ ಮನವಿ ಮಾಡಿಕೊಂಡರು. ಸಚಿವರು ಸ್ಥಳೀಯರ  ಬೇಡಿಕೆಗೆ ಸ್ಪಂದಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳುವ ಬರವಸೆ ನೀಡುವುದರೊಂದಿಗೆ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಸ್ಥಳೀಯ ಪಂಚಾಯತ್ ಅಧ್ಯಕ್ಷ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆಯನ್ನು  ಬೆಂಗಳೂರಿನಲ್ಲಿ ದಿನಾಂಕ ೧೨-೧೧-೨೦೧೪ ರಂದು ಕರೆದಿದ್ದು, ಸದ್ರಿ ಯೋಜನೆಯನ್ನು ಅತೀ ಶೀಘ್ರವಾಗಿ ಕಾರ್ಯ ರೂಪಕ್ಕೆ ತರುವ ಕುರಿತು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅಧೀಕ್ಷಕ ರಾಮಕ್ರಷ್ಣ ಅಡಿಗ ಮೊದಲಾದವರು ಉಪಸ್ಥಿತರಿದ್ದು ಸಚಿವರನ್ನು ಸ್ವಾಗತಿಸಿದರು.

 

Write A Comment