ಕರಾವಳಿ

ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ  ಭಕ್ತರ ಕಣ್ಮಣ ಸೆಳೆದ ‘ವಿಶ್ವರೂಪದರ್ಶನ’.

Pinterest LinkedIn Tumblr

bantwal_temple_dharshana_1

ಬಂಟ್ವಾಳ,ನ,೦3 : ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟ್ವಾಳದಲ್ಲಿ ನೆಲೆಯಾಗಿ ಸಮಸ್ತ ಭಕ್ತ ಸಮೂಹವನ್ನು ಹರಸುತ್ತಿರುವ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಭಾನುವಾರ ಮುಂಜಾನೆ ಹಣತೆ ದೀಪದ ‘ವಿಶ್ವರೂಪದರ್ಶನ’ ಭಕ್ತರ ಕಣ್ಮನ ಸೆಳೆಯಿತು. ಪ್ರಾತ: ಕಾಲ 4.30ರ ಬ್ರಾಹ್ಮೀ ಮಹೂರ್ತದಲ್ಲಿ ದೇವಳದ ಪ್ರಧಾನ ಆರ್ಚಕ ಶ್ರೀನಿವಾಸ ಭಟ್ ರವರು ಮಲ್ಲಿಗೆ ಪ್ರಿಯ ಶ್ರೀತಿರುಮಲ ವೆಂಕಟರಮಣನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೊರಾಂಗಣದ ತುಳಸಿಕಟ್ಟೆ ಬಳಿ ದೀಪ ಪ್ರಜ್ವಲನಗೈದು ಚಾಲನೆ ನೀಡಿದರು.

bantwal_temple_dharshana_2 bantwal_temple_dharshana_3 bantwal_temple_dharshana_4 bantwal_temple_dharshana_5 bantwal_temple_dharshana_6

ತಕ್ಷಣ ದೇವಳದಲ್ಲಿ ಅದಾಗಲೇ ನೆರೆದಿದ್ದ ಭಕ್ತರು ದೇವಳದ ಸುತ್ತಲೂ ಜೋಡಿಸಿಟ್ಟಿದ್ದ ಸಾವಿರಾರು ಹಣತೆಯನ್ನು ಬೆಳಗಿಸಿದರು. ಮಕ್ಕಳು, ಹೆಂಗಳೆಯರು,ವೃದ್ದರು ಸೇರಿದಂತೆ ಭಕ್ತ ಸಮೂಹ ಏಕಕಾಲದಲ್ಲಿ ಹಣತೆ ದೀಪಗಳನ್ನು ಬೆಳಗಿಸಿ ಧನ್ಯರಾದರು.

bantwal_temple_dharshana_7 bantwal_temple_dharshana_8 bantwal_temple_dharshana_9 bantwal_temple_dharshana_12

ಬಳಿಕ ಸರತಿ ಸಾಲಿನಲ್ಲಿ ನಿಂತು ಹೂವಿನಿಂದ ವಿಶೇಷಾಲಂಕೃತಗೊಂಡಿದ್ದ ಶ್ರೀ ದೇವರ ದರ್ಶನ ಪಡೆದರು.ದೇವಳದ ಒಳಾಂಗಣವನ್ನು ಹೂವಿನಿಂದ ಶೃಂಗರಿಸಲಾಗಿತ್ತು.

bantwal_temple_dharshana_14 bantwal_temple_dharshana_15 bantwal_temple_dharshana_16 bantwal_temple_dharshana_17 bantwal_temple_dharshana_13 bantwal_temple_dharshana_14 bantwal_temple_dharshana_15 bantwal_temple_dharshana_16 bantwal_temple_dharshana_17

ಇದೇ ವೇಳೆ ಹೊರಾಂಗಣದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಸಂಪದಾ ಭಟ್ ಹಾಗೂ ಚಲನ ಚಿತ್ರ ಗಾಯಕಿ ಸೀಮಾ ಮತ್ತು ರಾಯ್‌ಕರ್ ಅವರ ಭಜನಾ ‘ಜುಗಲ್‌ಬಂದಿ’ ನೆರೆದ ಭಕ್ತ ಸಮೂಹದ ಗಮನ ಸೆಳೆಯಿತು.

bantwal_temple_dharshana_18 bantwal_temple_dharshana_19 bantwal_temple_dharshana_20

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು, ಸೇವಾದಾರರು, ಗಣ್ಯರು, ಪಾಲ್ಗೊಂಡಿದ್ದರು. ದೇವರ ದರ್ಶನ ಬಳಿಕ ಪ್ರತಿಯೊಬ್ಬರಿಗೂ ಲಡ್ಡು ಪ್ರಸಾದ ವಿತರಿಸಲಾಯಿತು.ಮುಂಜಾನೆಯಿಂದ ಬೆಳಿಗ್ಗೆ 7 ಗಂಟೆಯವರೆಗೂ ವಿಶ್ವರೂಪ ದರ್ಶನ ವೀಕ್ಷಿಸಲು ಭಕ್ತರು ಸಾಲುಗಟ್ಟಿ ಬರುತ್ತಿದ್ದರು.

Write A Comment