ಕರಾವಳಿ

ಕುಂದಾಪುರ: ಬಿಜೆಪಿ ಕಛೇರಿಯಲ್ಲಿ ಸಹೋದರಿ ನಿವೇದಿತ ಜಯಂತಿ

Pinterest LinkedIn Tumblr

ಕುಂದಾಪುರ: ಸಹೋದರಿ ನಿವೇದಿತ ಜನ್ಮ ದಿನಾಚರಣೆಯು ಬಿಜೆಪಿ ಪಕ್ಷದ ಕಛೇರಿಯಲ್ಲಿ ಮಹಿಳಾ ಮೋರ್ಚಾದ ವತಿಯಿಂದ ನಡೆಯಿತು.

ಉಡುಪಿ ನಗರ ಸಭೆಯ ಮಾಜಿ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ ಮಾತನಾಡಿ, ಒಬ್ಬ ಪರದೇಶದ ಮಹಿಳೆ ಭಾರತಕ್ಕೆ ಬಂದು ಜನಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಭಾರತೀಯರಂತೆ ಅವರು ಜೀವನ ಸಾಗಿಸಿದ್ದು ನಮಗೆಲ್ಲ ಮಾದರಿ ಎಂದರು.

Kundapura_Nivedita_Jayanthi

ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿಯವರು ಮಾತನಾಡಿ ನೀವೆಲ್ಲರೂ ಕೂಡಾ ತಮ್ಮ ಮನೆ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡು ಬಡ ಜನರಿಗೆ ತಮ್ಮಿಂದಾದ ಸಹಾಯಮಾಡಿ ತಮ್ಮನ್ನು ತಾವು ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಾಲಿನಿ ಸತೀಶ್, ಕ್ಷೇತ್ರ ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿ ಗೌರಿ ಶಿವಾನಂದ ಹಾಗೂ ಮಹಿಳಾ ಮೋರ್ಚಾ ಸದಸ್ಯೆರು ಉಪಸ್ಥಿತರಿದ್ದರು.

Write A Comment