ಕರಾವಳಿ

ಗಂಗೊಳ್ಳಿ ವಧೆಮಾಡಲು ಕಟ್ಟಿಹಾಕಿದ್ದ ಜಾನುವಾರು ರಕ್ಷಣೆ

Pinterest LinkedIn Tumblr

ಕುಂದಾಪುರ: ವಧೆ ಮಾಡಲು ಮನಯೊಂದರ ಆವರಣದಲ್ಲಿ ಕಟ್ಟಿಹಾಕಲಾಗಿದ್ದ ಜಾನುವಾರನ್ನು ಸ್ಥಳೀಯರು ರಕ್ಷಿಸಿದ ಘಟನೆ ಮಂಗಳವಾರ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ೫ ಸೆಂಟ್ಸ್ ಪರಿಸರದಲ್ಲಿ ನಡೆದಿದೆ.

cattle
ಕಳೆದ 2-3 ದಿನಗಳಿಂದ ಅನ್ಯ ಕೋಮಿನ ಮನೆಯೊಂದರ ಆವರಣದಲ್ಲಿ ಜಾನುವಾರನ್ನು ಕಟ್ಟಿ ಹಾಕಿರುವುದನ್ನು ಗಮನಿಸಿದ ಸ್ಥಳೀಯರು, ಈ ಬಗ್ಗೆ ಮನೆಯವರಲ್ಲಿ ವಿಚಾರಿಸಿದಾಗ ವಧೆ ಮಾಡಲು ತಂದಿರುವುದು ಕಂಡು ಬಂದಿದೆ.

ಬಳಿಕ ಸ್ಥಳೀಯರು ಪೊಲೀಸರ ಗಮನಕ್ಕೆ ತಂದು ವಧೆ ಮಾಡಲು ಕಟ್ಟಿ ಹಾಕಿರುವ ದನವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ದನವನ್ನು ಸ್ಥಳೀಯ ನಿವಾಸಿಯೊಬ್ಬರು ನೀಡಿರುವುದಾಗಿ, ಈ ಬಗ್ಗೆ ಯಾವುದೇ ದೂರು ದಾಖಲಿಸದಂತೆ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿಲ್ಲ.

Write A Comment