ಕುಂದಾಪುರ: ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಕರ್ನಾಟಕ ಸರಕಾರ ತಾಲೂಕು ರಚನೆ ಘೋಷಿಸಬೇಕು. ಹಾಗೂ ಬೈಂದೂರನ್ನು ಕೂಡಲೇ ತಾಲೂಕಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಬೈಂದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನುಭಾಗ್ ಅವರ ಮುಂದಾಳತ್ವದಲ್ಲಿ ಸಾರ್ವಜನಿಕರು ಬೈಂದೂರಿನ ಶಾಸಕರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮೊಬೈಲ್ ಎಸ್.ಎಮ್.ಎಸ್ ಮೂಲಕ ಸಂದೇಶ ನೀಡಿ ಒತ್ತಾಯಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.
ಬೈಂದೂರು ತಾಲೂಕು ವ್ಯಾಪ್ತಿಗೆ ಒಳಪಟ್ಟ ಸಮಸ್ತ ನಾಗರಿಕರು ವಿವಿಧ ರಾಜಕೀಯ ಪಕ್ಷದ ಮುಖಂಡರು(ಕಾರ್ಯಕರ್ತರು) ವಿವಿಧ ಸಂಘಸಂಸ್ಥೆಯ ನೇತಾರರು, ಈ ಅಭಿಯಾನಕ್ಕೆ ಕೈಜೋಡಿಸಿ ತಮ್ಮ ಮೊಬೈಲ್ ಮೂಲಕ ಎಸ್.ಎಮ್.ಎಸ್ ಸಂದೇಶವನ್ನು ಬೈಂದೂರು ಶಾಸಕರಿಗೆ ಕಳುಹಿಸಬೇಕು. ಹಾಗೂ ಪ್ರತಿ ಗ್ರಾಮದಲ್ಲಿಯೂ ಸಾರ್ವಜನಿಕರು ಸಹಿ ಸಂಗ್ರಹಿಸಿ ಗ್ರಾಮಪಂಚಾಯಿತ್ ಕಾರ್ಯದರ್ಶಿಗಳ/ ಪಿ.ಡಿ.ಒ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಿ ಬೈಂದೂರು ತಾಲೂಕು ರಚನೆಗೆ ಒತ್ತಾಯಿಸಬೇಕೆಂದು ಕರೆ ನೀಡಿದ್ದಾರೆ.
ನವೆಂಬರ್ 1 ರಾಜ್ಯೋತ್ಸವದವರೆಗೆ ಅಭಿಯಾನ ನಡೆಸಬೇಕೆಂದು ವಿನಂತಿಸಲಾಗಿದೆ.