ಉಡುಪಿ: ಬಿಜೆಪಿ ಹಾಗೂ ಮೋದಿ ಅವರ ಭಾವನಾತ್ಮಕ ಬ್ಲಾಕ್ವೆುಲ್ ಮಾಡುವ ಮೂಲಕ ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ಹರಿಯಾಣ, ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರ ಕಾರ್ಕಳಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀವ ಗಾಂಧಿ ಅವರ ಸಮಯದಲ್ಲಿ ಕಾಂಗ್ರೆಸ್ ಅತೀ ಎತ್ತರಕ್ಕೆ ಹೋಗಿ ಬಳಿಕ ಹಿನ್ನಡೆ ಅನುಭವಿಸಿತ್ತು. ಅಂತೆಯೇ ಬಿಜೆಪಿಯ ಈ ಗೆಲುವು ಕೇವಲ ತಾತ್ಕಾಲಿಕ.ಇದಕ್ಕೆ ಕಾಂಗ್ರೆಸ್ ದ್ರತಿಕೆಡಬೇಕಾಗಿಲ್ಲ, ಕಾಂಗ್ರೆಸ್ನ ಶಕ್ತಿ ಮತ್ತೆ ಚೇತರಿಕೆಯಾಗುತ್ತದೆ ಎಂದರು.