ಕರಾವಳಿ

ಖಡ್ಗ ದೀಕ್ಷೆ, ವಿವಾದಾತ್ಮಕ ಹೇಳಿಕೆ : ಕೋರ್ಟ್‌ಗೆ ಹಾಜರಾದ ಪ್ರಣವಾನಂದ ಸ್ವಾಮೀಜಿ

Pinterest LinkedIn Tumblr

swamiji_court_photo_1

ಮಂಗಳೂರು,ಅ.18: ಯುವಕರಿಗೆ ಖಡ್ಗದೀಕ್ಷೆ ನೀಡುವ ಹೇಳಿಕೆ ನೀಡಿದ್ದ ಪ್ರಣವಾನಂದ ಸ್ವಾಮೀಜಿ ಶುಕ್ರವಾರ ಬೆಳಗ್ಗೆ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾದರು. ನಗರದಲ್ಲಿ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಣವಾನಂದ ಸ್ವಾಮೀಜಿ, ಯುವಕರಿಗೆ ಖಡ್ಗ ದೀಕ್ಷೆ ನೀಡುವುದಾಗಿ ಹೇಳಿಕೆ ನೀಡಿದ್ದರು.

swamiji_court_photo_2 swamiji_court_photo_3 swamiji_court_photo_4 swamiji_court_photo_5 swamiji_court_photo_6 swamiji_court_photo_7

ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ ವೇದಿಕೆ ಕಾರ್ಯಕರ್ತರು ಸ್ವಾಮೀಜಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಆದರೆ, ಸ್ವಾಮೀಜಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದರೂ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ಇದರಿಂದ ಬಂಧನ ಭೀತಿಯಲ್ಲಿದ್ದ ಪ್ರಣವಾನಂದ ಸ್ವಾಮೀಜಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

Write A Comment