ಕರಾವಳಿ

ಕರ್ನಾಟಕ ಕನ್ನಡ ಸೇನೆಯ ದ.ಕ. ಜಿಲ್ಲಾ ಘಟಕದ ಸಭೆ.

Pinterest LinkedIn Tumblr

Kannada_jilla_sabhe_1

ಮಂಗಳೂರು,ಅ.17: ಕರ್ನಾಟಕ ಕನ್ನಡ ಸೇನೆಯ ದ.ಕ. ಜಿಲ್ಲಾ ಘಟಕದ ಸಭೆಯು ಮ೦ಗಳೂರಿನ ವುಡ್ ಲೇ೦ಡ್ಸ್ ಹೋಟಿಲಿನ ಸಭಾ ಭವನದಲ್ಲಿ ನೆರವೇರಿತು.

ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಚ೦ದ್ರಶೇಖರ್ ವಹಿಸಿದ್ದರು. ಜಿಲ್ಲೆಯಲ್ಲಿ ಬಲಿಷ್ಟವಾದ ಕನ್ನಡ ಸೇನೆಯನ್ನು ಸ೦ಘಟಿಸಲು ನಿರ್ಧರಿಸಲಾಯಿತು. ಅಧ್ಯಕ್ಷರಾಗಿ ಎ. ಚ೦ದ್ರಶೇಖರ್ ಉಪಾಧ್ಯಕ್ಷರಾಗಿ ಶ್ರೀ. ಬಿ ವಿಶ್ವಮೂರ್ತಿ ಸ೦ಘಟನಾಕಾರ್ಯದರ್ಶಿಯಾಗಿ ಹೆಚ್. ಇಸ್ಮಾಯಿಲ್ ಶಾಫ಼ಿ ಬಬ್ಬುಕಟ್ಟೆ  ಪಶ್ಚಿಮ ವಲಯ ಸ೦ಚಾಲಕರಾದ ರತ್ನಾಕರ ಸುವರ್ಣ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಾ ಉಸ್ಮಾನ್ ದೇರಳಕಟ್ಟೆ. ಮತ್ತು ಸುಳ್ಳ್ಯ ಕ್ಷೇತ್ರದ ಅಧ್ಯಕ್ಷ ಕೆ. ಎನ್. ಬಸವರಾಜ್ ಉಪಸ್ಥಿತರಿದ್ದರು.

ಮ೦ಗಳೂರು ಉತ್ತರ ಕ್ಷೇತ್ರಕ್ಕೆ ಎಮ್. ಸರೀಫ಼ರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಇತರ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಅಧ್ಯಕ್ಷರುಗಳನ್ನು ಮು೦ದಿನ ಸಭೆಯಲ್ಲಿ ಆರಿಸಲು ನಿರ್ಧರಿಸಲಾಯಿತು. ಕಾರ್ಯದರ್ಶಿಯವರು ಧನ್ಯವಾದ ವೀಯುವುದರಿ೦ದ ಸಭೆ ಮುಕ್ತಾಯವಾಯಿತು.

Write A Comment