ಮಂಗಳೂರು,ಅ.08: ವಿಶ್ವ ತುಳುವೆರೆ ಪರ್ಬ 2014 ರ ಸಂಘಟನಾ ಸಮಿತಿ ಪದಾಧಿಕಾರಿಗಳು ಸಚಿವ ಅಭಯಚಂದ್ರ ಜೈನ್ ಅವರನ್ನು ಭೇಟಿ ಮಾಡಿ ಡಿಸೆಂಬರ್ 12 ರಿಂದ 14ರವರೆಗೆ ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ವರಣದಲ್ಲಿ ನಡೆಯುವ ವಿಶ್ವತುಳುವೆರೆ ಪರ್ಬ 2014 ಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿತು.
ತುಳು ಕೂಟದ ಪದಾಧಿಕಾರಿಗಳಾದ ಎ.ಸಿ.ಭಂಡಾರಿ ದಾಮೋದರ ನಿಸರ್ಗ ಶಶಿಧರ ಶೆಟ್ಟಿ ಅಡ್ಯಾರು ಮಹಾಬಲ ಶೆಟ್ಟಿ ಡಾ.ಕಿಶೋರ್ ರೈ ಚಂದ್ರಶೇಖರ ಸುವರ್ಣ ಧನಕೀರ್ತಿ ಬಲಿಪ ಚಂದ್ರಹಾಸ ದೇವಾಡಿಗ ಉಪಸ್ಥಿತರಿದ್ದರು.