ಕರಾವಳಿ

ವಿಶ್ವ ಹೃದಯ ದಿನಾಚರಣೆ : ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ “ಹೃದಯ ಕ್ಷೇಮ ನಡಿಗೆ”

Pinterest LinkedIn Tumblr

Nitte_heart_run_1

ಮಂಗಳೂರು : ನಿಟ್ಟೆ ಸಮೂಹ ಸಂಸ್ಥೆಯ ಅಂಗ ಸಂಸ್ಥೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ “ಹೃದಯದ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು “ಹೃದಯ ಕ್ಷೇಮ ನಡಿಗೆ” ಕಾರ್ಯಕ್ರಮ ಅದಿತ್ಯವಾರ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್   ಅವರು “ಹೃದಯ ಕ್ಷೇಮ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಜೆ.ಆರ್.ಲೋಬೋ ಮುಖ್ಯ ಅತಿಥಿಗಳಾಗಿದ್ದರು.

Nitte_heart_run_2 Nitte_heart_run_3 Nitte_heart_run_4 Nitte_heart_run_5 Nitte_heart_run_6

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಧೂಮಪಾನ ಹೃದಯಕ್ಕೆ ಮಾರಕ – ಕೊಬ್ಬು ರಹಿತ ಅಹಾರ ಹೃದಯಕ್ಕೆ ಪೂರಕ” ಎಂಬ ಘೋಷಣೆ ಮಾಡುವ ಮೂಲಕ ಈ ನಡಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುವ ಕಾರ್ಯ ಮಾಡಿದರು.

Nitte_heart_run_7 Nitte_heart_run_8 Nitte_heart_run_9 Nitte_heart_run_10 Nitte_heart_run_11

ಸಂಸ್ಥೆಯ ಅಧ್ಯಕ್ಷ ನಿಟ್ಟೆ ವಿನಯ ಹೆಗ್ಡೆ ಸ್ವಾಗತಿಸಿದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ಡಾ. ಶಾಂತರಾಮ್ ಶೆಟ್ಟಿ, ಹಾಗೂ ಅಸ್ಪತ್ರೆಯ ಇತರ ವೈಧ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Write A Comment