ವಿಶೇಷ ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್
ಮಂಗಳೂರು : ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಹೃದಯದ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು ಮಂಗಳೂರು ಕೆ.ಎಂ.ಸಿ. ವತಿಯಿಂದ ‘ಹೃದಯ ದಿನದ ಓಟ’ ಕಾರ್ಯಕ್ರಮ ಬಾನುವಾರ ನಡೆಯಿತು. ಪ್ರಸಕ್ತ ವರ್ಷ ಕೆಎಂಸಿ ಹಾಸ್ಪಿಟಲ್ ಹೃದಯ ದಿನದ ಓಟವನ್ನು ಸತತ ಹತ್ತನೇ ವರ್ಷ ಆಚರಿಸುವ ಮೂಲಕ ದಶಮಾನೋತ್ಸವವನ್ನು ಆಚರಿಸಿತು.
ಬೆಳಿಗ್ಗೆ ಟಿ.ಎಂ.ಎ. ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಹೃದಯ ದಿನದ ಉದ್ಘಾಟನೆ ಮತ್ತು ವಿಶ್ವಹೃದಯ ದಿನ ಓಟಕ್ಕೆ ಚಾಲನೆ ನೀಡಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಕ್ಲಿಫೋರ್ಡ್ ಜೋಶುವ ಅವರು ವಿಶ್ವ ಹೃದಯ ದಿನ ಓಟ 2014ರ ಜ್ಯೋತಿಯನ್ನು ಹಿಡಿದು ಓಡುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ದಕ್ಷಿಣ ಭಾರತದಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ| ಆನಂದ್ ವೇಣುಗೋಪಾಲ್ ಅವರು ಮಾತನಾಡಿ, ಈ ಉಪಕ್ರಮಗಳ ಮೂಲಕ ಹಲವಾರು ಹೃದಯ ಸಮಸ್ಯೆ ಕುರಿತಂತೆ ಜನರಲ್ಲಿ ಜಾಗೃತಿ ಯನ್ನು ಹೆಚ್ಚಿಸುವುದಲ್ಲದೆ ಅವರಿಗೆ ಶಿಕ್ಷಣ ಮತ್ತು ಮಾಹಿತಿ ನೀಡುವ ಯೋಜನೆಯನ್ನು ಕೆಎಂಸಿ ಆಸ್ಪತ್ರೆ ಹೊಂದಿದ್ದು ಇದರಿಂದ ಜನರು ಅಪಾಯ ರಹಿತ ಆರೋಗ್ಯ ಕರ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.
ಬಳಿಕ ಎಂಜಿ ರೋಡ್ ಮೂಲಕ ಆರಂಭಗೊಂಡ ‘ಹೃದಯ ದಿನದ ಓಟ’ ಪಿವಿಎಸ್ ಸರ್ಕಲ್ ಹಾದು ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಜ್ಯೋತಿ ಸರ್ಕಲ್ ನಲ್ಲಿ ಮುಕ್ತಾಯಗೊಂಡಿತ್ತು. ಕೆಎಂಸಿ ಹಾಸ್ಪಿಟಲ್ನ ಹೃದಯರೋಗ ಶಸ್ತ್ರಚಿಕಿತ್ಸಾತಜ್ಞರಾದಡಾ|| ನರಸಿಂಹ ಪೈ, ಕೆಎಂಸಿ ಹಾಸ್ಪಿಟಲ್ಸ್ನ ಘಟಕದ ಮುಖ್ಯಸ್ಥ ಸಗೀರ್ ಸಿದ್ಧಿಕಿ, ಕೆಎಂಸಿ ಹಾಸ್ಪಿಟಲ್ಸ್ನ ಹಿರಿಯ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ|| ಪದ್ಮನಾಭ ಕಾಮತ್, ಡಾ| ನರಸಿಂಹ ಪೈ, ಡಾ| ಆರ್.ಎಲ್. ಕಾಮತ್, ಡಾ| ಸುಜಿತ್ ಸುವರ್ಣ, ಡಾ| ಮನೀಶ್ ರೈ, ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕಾರಿಗಳು ಹಾಗೂ ಮಣಿಪಾಲ್ ಸಮೂಹ ಮತ್ತು ನಗರದ ಇತರ ಗಣ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ವಿಶೇಷ ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್