ಮಂಗಳೂರು,ಸೆ.26: ಇಪಿಎಫ್ ಪಿಂಚಣಿದಾರರ ಕರ್ನಾಟಕ ರಾಜ್ಯ ಸಮಾವೇಶ ಶುಕ್ರವಾರ ನಗರದ ವಿಶ್ವ ವಿಧ್ಯಾನಿಲಯ ಕಾಲೇಜ್ ಪಕ್ಕದ ಎನ್ಜಿಒ ಹಾಲ್ನಲ್ಲಿ ನಡೆಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಅಧ್ಯಕ್ಷತೆಯನ್ನು ವಹಿಸಿದ್ದು. ಸಿಐಟಿಯು ನಾಯಕಿ ಮೀನಾಕ್ಷಿ ಸುಂದರಂ ಸಮಾವೇಶವನ್ನು ಉದ್ಘಾಟಿಸಿದರು. ಹಿರಿಯ ಕಾರ್ಮಿಕ ನಾಯಕ ಕೆ.ಆರ್.ಶ್ರೀಯಾನ್, ಮುಖ್ಯ ಅತಿಥಿಗಳಾಗಿದ್ದರು. ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ನೂರಾರು ಮಂದಿ ಪಿಂಚಣಿದಾರರುಗಳು ಭಾಗವಹಿಸಿದ್ದರು.