ಮಂಗಳೂರು : ನಗರದ ಪಂಪ್ವೆಲ್ ಬಳಿ ಕಾರೊಂದು ಬೈಕಿಗೆ ಡಿಕ್ಕಿಯಾದ ಪರೀಣಾಮ ಬೈಕ್ ಸವಾರರಾಗಿದ್ದ ಟ್ರಾಫಿಕ್ ಪೊಲೀಸ್ ಒಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಸುರತ್ಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಪೊಲೀಸ್ ಪೇದೆಯನ್ನು ಭಾಸ್ಕರ್ ಎಂಬುದ್ದಾಗಿ ತಿಳಿದು ಬಂದಿದೆ.ಅಪಘಾತಕ್ಕೀಡಾದ ಕಾರು ಹೊಸಂಗಡಿಯಿಂದ ಮಂಗಳೂರಿನತ್ತ ಬರುತ್ತಿದ್ದು ಬೈಕಿಗೆ ಡಿಕ್ಕಿ ಹೊಡೆದ ಪರ್ಇಣಾಮ ಭಾಸ್ಕರ್ ಮೃತಪಟ್ಟರು ಎನ್ನಲಾಗಿದೆ.
ಭಾಸ್ಕರ್ ಅವರು ಕಣ್ಣು ಮತ್ತು ಮೂತ್ರಪಿಂಡವನ್ನು ದಾನ ಮಾಡಲು ನೊಂದಣಿ ಮಾಡಿದ್ದರು.