ಉಳ್ಳಾಲ,ಸೆಪ್ಟೆಂಬರ್.17: ಉಳ್ಳಾಲ ಸೀಗ್ರೌಂಡಿನಲ್ಲಿರುವ ತೆಲೋಕಾ ಅಮಲು ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮೂಡಬಿದ್ರೆ ನಿವಾಸಿ ಸುಧಾ (20) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಸುಧಾಳನ್ನು (20), ಮೂಡುಬಿದಿರೆ ನಿವಾಸಿ ಚೆನ್ನಕೇಶವ ಮಗಳು ಎಂದು ಗುರುತಿಸಲಾಗಿದೆ.
ಅಮಲು ಪದಾರ್ಥ ಮತ್ತು ಮದ್ಯವ್ಯಸನಿಯಾಗಿದ್ದ ಸುಧಾಳನ್ನು ಆಕೆಯ ತಂದೆ ಮೇ 20 ರಂದು ಅಮಲು ಪದಾರ್ಥಗಳಿಂದ ಮುಕ್ತವಾಗಲು ಉಳ್ಳಾಲದ ತೆಲೋಕಾ ಅಮಲು ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದರು.
ಭಾನುವಾರ ಸೆಪ್ಟೆಂಬರ್ 14 ರಂದು ಸುಧಾಳನ್ನು ಬಿಡುಗಡೆಗೊಳಿಸಿ ಊರಿಗೆ ಕರೆದೊಯ್ದಿದ್ದರು. ಮಂಗಳವಾರದಂದು ಮತ್ತೆ ಅಮಲು ಚಿಕಿತ್ಸಾ ಕೇಂದ್ರಕ್ಕೆ ಬಂದಿದ್ದಾಕೆ ಮಧ್ಯಾಹ್ನದವರೆಗೂ ಅಲ್ಲೇ ಇದ್ದು, ಬಳಿಕ ಕೇಂದ್ರದ ಆವರಣದಲ್ಲಿರುವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉಳ್ಳಾಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.