ಕರಾವಳಿ

ಸೆ. 18 ಅಜಿತ್ ಸಾಹಿ ಮಂಗಳೂರಿಗೆ ಅಗಮನ

Pinterest LinkedIn Tumblr

ajitha_shai_visitmanglore_1

ಮಂಗಳೂರು: ಹೆಸರಾಂತ ರಾಜಕೀಯ ವಿಶ್ಲೇಷಕ, ಹಿರಿಯ ಸಾಹಿತಿ ಅಜಿತ್ ಸಾಹಿಯವರು ಸೆ. 18ರಂದು ಗುರುವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಅವರು ಇಲ್ಲಿನ ಬಲ್ಮಠದ ಶಾಂತಿ ನಿಲಯದಲ್ಲಿ ಸಂಜೆ 4:30ಕ್ಕೆ “ಭಯೋತ್ಪಾದನಾ ರಾಜಕೀಯ: ಸುಳ್ಳು ಮತ್ತು ವಾಸ್ತವಿಕತೆ” ಎಂಬ ವಿಷಯದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ್ನಿ ಯವರು ಭಾಗವಹಿಸಲಿದ್ದಾರೆ. ಮಹಿಳೆಯರಿಗೂ ಪ್ರತ್ಯೇಕ ಸ್ಥಳಾವಕಾಶವಿರುವುದಾಗಿ ಯೂತ್‍ವಿಂಗ್ ದ.ಕ. ಜಿಲ್ಲಾ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Write A Comment