ಅಂತರಾಷ್ಟ್ರೀಯ

ಕಣಿವೆಗೆ ಉರುಳಿದ ಯಾತ್ರಾರ್ಥಿಗಳ ಬಸ್: 14 ಜನ ಮೃತ್ಯು

Pinterest LinkedIn Tumblr


ಕಾಠ್ಮಂಡು: ಯಾತ್ರಾರ್ಥಿಗಳಿಂದ ತುಂಬಿದ್ದ ಬಸ್ ಕಮರಿಗೆ ಉರುಳಿ ಬಿದ್ದು ಸುಮಾರು 14 ಜನರು ಮೃತಪಟ್ಟ ಘಟನೆ ನೇಪಾಳದ ಕಾಠ್ಮಂಡುವಿನಲ್ಲಿ ನಡೆದಿದೆ.

ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ಯಾತ್ರಾರ್ಥಿಗಳು ಪ್ರಸಿದ್ಧ ಹಿಂದೂ ಕಲಿಂಚೌಕ್ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸ್ ಬರುವಾಗ ಈ ದುರ್ಘಟನೆ ನಡೆದಿದೆ.

ಘಟನೆಯಲ್ಲಿ 18ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಚಾಲಕನಿಗೆ ದಾರಿಯ ಬಗ್ಗೆ ಅರಿವಿರದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Comments are closed.