ಅಂತರಾಷ್ಟ್ರೀಯ

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಬಸ್ ಚಾಲಕನನ್ನು ಸಜೀವವಾಗಿ ದಹಿಸಿದ ದುಷ್ಕರ್ಮಿ

Pinterest LinkedIn Tumblr

manmeet

ಸಿಡ್ನಿ: ಭಾರತೀಯ ಮೂಲದ ಬಸ್ ಚಾಲಕನ್ನು ಆಸ್ಟ್ರೇಲಿಯಾದಲ್ಲಿ ಸಜೀವ ದಹನ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಬಸ್ ಚಾಲನೆ ಮಾಡುತ್ತಿದ್ದಾಗ ಆಗಂತುಕನೊಬ್ಬ ಬಂದು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ದ್ರವ್ಯವೊಂದನ್ನು ಚಾಲಕ ಮನ್ಮೀತ್ ಅಲಿಶರ್ ಮೇಲೆ ಎರಚಿ, ಕಿಚ್ಚಿಟ್ಟಿದ್ದಾನೆ.

ಬಸ್‍‍ ಪ್ರಯಾಣಿಕರ ಕಣ್ಮುಂದೆಯೇ ಈ ಘಟನೆ ನಡೆದಿದೆ. ಬಸ್ ಚಾಲಕ ಹೊತ್ತಿ ಉರಿಯುತ್ತಿದ್ದಂತೆ ಬಸ್‍ನಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 29ರ ಹರೆಯದ ಅಲಿಶರ್ ಬ್ರಿಸ್ಬೇನ್‍ನಲ್ಲಿರುವ ಪಂಜಾಬಿ ಸಮುದಾಯದಲ್ಲಿ ಚಿರಪರಿಚಿತ ಗಾಯಕರಾಗಿದ್ದಾರೆ.

ಆದಾಗ್ಯೂ, ಈ ಕೃತ್ಯ ಜನಾಂಗೀಯ ದ್ವೇಷದಿಂದ ನಡೆದದ್ದಲ್ಲ ಎಂದು ಪೊಲೀಸ್ ಕಮಿಷನರ್ ಇಯಾನ್ ಸ್ಟೆವಾರ್ಟ್ ಹೇಳಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ 48ರ ಹರೆಯದ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.