ಲಾಹೋರ್: ನಿಜವಾದ ಸೀಮಿತ ದಾಳಿ(ಸರ್ಜಿಕಲ್ಸ್ಟ್ರೈಕ್) ಅಂದ್ರೆ ಏನು ಅಂತ ಭಾರತಕ್ಕೆ ನಾವು ತೋರಿಸುತ್ತೇವೆ ಎಂದು ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್ಉದ್ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ಸಯೀದ್ಶುಕ್ರವಾರ ಹೇಳಿದ್ದಾನೆ.
ಇಂದು ಫೈಸಲಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಫೀಜ್ ಸಯೀದ್, ನಿಜವಾದ ಸೀಮಿತ ದಾಳಿ ಅಂದ್ರೆ ಏನು ಅಂತ ನಾವು ಹೇಳುತ್ತವೇ. ಶೀಘ್ರದಲ್ಲೇ ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.
ಭಾರತೀಯ ಸೇನೆ ಪಾಕ್ಅಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ್ದು ಸುಳ್ಳು, ಈಗ ಪಾಕಿಸ್ತಾನ ಸೈನಿಕರು ನಿಜವಾದ ಸೀಮಿತ ದಾಳಿ ಏನೆಂಬುದನ್ನು ತೋರಿಸಲಿದ್ದಾರೆ…. ಅಮೆರಿಕ ನಿಮಗೆ ಸಹಾಯ ಮಾಡಲ್ಲ ಎಂದು ನಾನು ಭಾರತೀಯ ಮಾಧ್ಯಮಕ್ಕೆ ಹೇಳಲು ಬಯಸುತ್ತೇನೆ ಎಂದಿದ್ದಾನೆ.
ಕಳೆದ ಬುಧವಾರ ತಡ ರಾತ್ರಿ ಪಾಕ್ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಭಾರತೀಯ ಸೇನೆ ಸುಮಾರು ಉಗ್ರರನ್ನು ಹತ್ಯೆ ಮಾಡಿತ್ತು. ಅಲ್ಲದೆ ಈ ದಾಳಿಯಲ್ಲಿ ಇಬ್ಬರು ಪಾಕ್ ಸೈನಿಕರು ಸಹ ಮೃತಪಟ್ಟಿದ್ದರು.
Comments are closed.