ರಾಷ್ಟ್ರೀಯ

ಜು.17ರಿಂದ 5 ದಿನ ಶಬರಿಮಲೆ ದೇಗುಲ ಓಪನ್; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ

Pinterest LinkedIn Tumblr

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ತಿಂಗಳಪೂಜೆ (ಮಾಸಪೂಜೆ) ಸಲುವಾಗಿ 5 ದಿನಗಳ ಕಾಲ ಅಂದರೆ ಜು.17ರಿಂದ 21ರವರೆಗೆ ಬಾಗಿಲು ತೆರೆಯಲಿದೆ. ಕೇರಳದಲ್ಲೀಗ ಮಲಯಾಳಂ ತಿಂಗಳು ನಡೆಯುತ್ತಿದ್ದು, ಅದರ ನಿಮಿತ್ತ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಶನಿವಾರ ಮಾಹಿತಿ ನೀಡಿದೆ.

(ಸಂಗ್ರಹ ಚಿತ್ರ)

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು. 48 ಗಂಟೆಗಳ ಹಿಂದೆ ಪಡೆದ ಆರ್​ಟಿ-ಪಿಸಿಆರ್​ ನೆಗೆಟಿವ್​​ ರಿಪೋರ್ಟ್​ ತರಬೇಕು. ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ. ದೇಗುಲಕ್ಕೆ ಆಗಮಿಸಲು ಭಕ್ತರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿಯನ್ನು ವರ್ಚ್ಯುವಲ್​ ಕ್ಯೂ ಮೂಲಕ ನೀಡಿ, ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಬೇಕಾಗುತ್ತದೆ.

ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮೇ ತಿಂಗಳಿಂದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿತ್ತು.

Comments are closed.