ರಾಷ್ಟ್ರೀಯ

ಒಡಿಶಾ; ಮರಕ್ಕೆ ಢಿಕ್ಕಿ ಹೊಡೆದ ಪಿಕ್ ಅಪ್ ವ್ಯಾನ್: 9 ಮಂದಿ ಸಾವು- 11 ಮಂದಿಗೆ ಗಾಯ

Pinterest LinkedIn Tumblr

ಜೇಪೋರ್: ವ್ಯಕ್ತಿ ನಿಧನವಾಗಿ 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. ಪಿಕ್ ಅಪ್ ವ್ಯಾನ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದು 9 ಮಂದಿ ಮೃತಪಟ್ಟು 11 ಮಂದಿಗೆ ಗಾಯವಾದ ಘಟನೆ ಒಡಿಶಾದ ಜೇಪೋರ್ ನ ಮುರ್ತಹಂಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

7 ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತಿಬ್ಬರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಒಡಿಶಾದ ನೈರುತ್ಯ ವಲಯದ ಡಿಐಜಿ ರಾಜೇಶ್ ಪಂಡಿತ್ ತಿಳಿಸಿದ್ದಾರೆ.

ಗಾಯಗೊಂಡ 11 ಮಂದಿಯಲ್ಲಿ ನಾಲ್ವರು ಕೊಟ್ಪಾಡ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಮತ್ತೆ 7 ಮಂದಿ ಜಗ್ದಾಲ್ ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ 8.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತದ ನಂತರ ಚಾಲಕ ತಲೆಮರೆಸಿಕೊಂಡಿದ್ದಾನೆ. ರೈಲ್ವೆ ಹಳಿ ಹಿಂದೆ ರಸ್ತೆಯಲ್ಲಿ ಪಿಕ್ ಅಪ್ ವ್ಯಾನ್ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಾಹನದೊಳಗೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ: ಒಡಿಶಾ ರಾಜ್ಯದ ಕೊರಪುಟ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.

Comments are closed.