ರಾಷ್ಟ್ರೀಯ

ತಾಯಿಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿ ‘ಓಂ ಶಾಂತಿ ಓಂ’ ಎಂದ!: ಹತ್ಯೆಗೆ ಕಾರಣ ಕೇಳಿದರೆ ಶಾಕ್​!

Pinterest LinkedIn Tumblr


ಗಾಂಧಿನಗರ: ಪುತ್ರನೊಬ್ಬ ಅಮ್ಮನನ್ನೇ ಹತ್ಯೆ ಮಾಡಿ, ಅಂಗಳದಲ್ಲಿ ಆಕೆಯ ಮೃತ ದೇಹವನ್ನಿಟ್ಟು, ಬೆಂಕಿ ಹಚ್ಚಿ, ಮಂತ್ರ ಪಠಿಸಿರುವ ಘಟನೆ ಗುಜರಾತ್​ನ ಬರೋಡಾದಲ್ಲಿ ನಡೆದಿದೆ.

ಸಹೋದರ ಈ ರೀತಿ ಮಾಡಿದ್ದಕ್ಕೆ ಕಾರಣ ಕೇಳಿದ ಸಹೋದರಿ ಶಾಕ್​ ಆಗಿದ್ದು, ಪೊಲೀಸ್​ ದೂರು ದಾಖಲಿಸಿದ್ದಾಳೆ. ಬರೋಡಾದ ದಿವ್ಯೇಶ್​ ಸೋಮವಾರದಂದು ತಾಯಿಯ ಎದೆಗೆ ಹೊಡೆದಿದ್ದಾನೆ. ನಂತರ ಆಕೆಗೆ ಮನಸೋಇಚ್ಛೆ ಹೊಡೆದು ಕೊಲೆ ಮಾಡಿದ್ದಾನೆ. ಆಕೆಯ ಮೃತ ದೇಹವನ್ನು ಅಂಗಳಕ್ಕೆ ಎಳೆ ತಂದಿದ್ದಾನೆ. ಅಲ್ಲಿ ದೇಹದ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಪಕ್ಕದಲ್ಲಿ ನಿಂತು ‘ಓಂ ಶಾಂತಿ ಓಂ’ ಎಂದು ಪಠಿಸಲಾರಂಭಿಸಿದ್ದಾನೆ. ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಕೂಡಲೇ ಆತನ ಸಹೋದರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಮನೆಗೆ ಬಂದ ಸಹೋದರಿ ದಿವ್ಯೇಶ್​ನನ್ನು ಪ್ರಶ್ನಿಸಿದ್ದಾಳೆ. ಅಮ್ಮನನ್ನು ಏಕೆ ಕೊಂದೆ ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರಿಸಿದ ದಿವ್ಯೇಶ್​, ಸತ್ತು ಹೋಗಿರುವ ನನ್ನ ಅಪ್ಪ ಕನಸಿನಲ್ಲಿ ಬಂದಿದ್ದರು. ಅಮ್ಮನನ್ನು ನನ್ನ ಬಳಿ ಕಳುಹಿಸಿಕೊಡು ಎಂದು ಕೇಳಿದರು. ಅದಕ್ಕೇ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ. ದಿವ್ಯೇಶ್​ನ ನಡವಳಿಕೆ ಕಂಡು ಗಾಬರಿಗೊಂಡಿರುವ ಸಹೋದರಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Comments are closed.