ಅಹಮದಾಬಾದ್: 20 ವರ್ಷದ ಹಿಂದೆ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಗಂಡ ಈಗ ಹುಡುಕಿ ಹತ್ಯೆ ಮಾಡಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಹತ್ಯೆಗಿಡಾದ ವ್ಯಕ್ತಿಯನ್ನು 40 ವರ್ಷದ ರಾಜು ಹುಡಾ ಎಂದು ಗುರುತಿಸಲಾಗಿದೆ. ಚೇಲಾ ಭರದ್ ತನ್ನ ಸೋದರ ಮಾವ ದೌಲಾ ಭರ್ವಾಡ್, ಆನಂದ್ನಗರದ ನಿವಾಸಿ ಮಹೇಶ್ ಭರದ್ ಮತ್ತು ಸೂರತ್ ನಿವಾಸಿಗಳಾದ ರಮೇಶ್ ಮಾರ್ವಾಡಿ ಮತ್ತು ಪ್ರತೀಕ್ ಶೆಟ್ಟಿ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ. ಈಗ ಈ ಐವರನ್ನು ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ಹಿಂದೆ ಮದುವೆಯಾಗಿದ್ದ ಚೇಲಾ ಭರದ್ನಿಗೆ ಈಗ ಜ್ಯೋತಿಷಿಯೊಬ್ಬ ನಿನ್ನ ಪತ್ನಿ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಚೇಲಾ ಮನೆಗೆ ಬಂದು ಹೆಂಡತಿಯನ್ನು ಹೊಡೆದು ಯಾರು ಹೇಳು ಎಂದು ಹೆದರಿಸಿದ್ದ. ಪತಿಯ ಕೋಪಕ್ಕೆ ಭಯಪಟ್ಟ ಹೆಂಡತಿ ಮದುವೆಗೂ ಮುಂಚೆ ನನಗೆ ನಮ್ಮ ಊರಿನ ರಾಜು ಹುಡಾ ಜೊತೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಳು. ಆಗ ಚೇಲಾ ಆತನನ್ನು ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದ.
ಹೀಗಿರುವಾಗ ರಾಜು ತನ್ನ ಸೋದರ ಅತ್ತೆಗೆ ಹುಷಾರಿಲ್ಲವೆಂದು ನೋಡಿಕೊಂಡು ಬರಲು ಚೇಲಾ ಅವರ ಊರಿಗೆ ಬಂದಿದ್ದ. ಇದನ್ನೆ ಉಪಯೋಗಿಸಿಕೊಂಡ ಚೇಲಾ, ರಾಜು ಹುಡಾನನ್ನು ಫೋನ್ ಮಾಡಿ ಕರೆಸಿಕೊಂಡು ತನ್ನ ಸಚಹರರೊಂದಿಗೆ ಸೇರಿ ಕೊಲೆ ಮಾಡಿ ಮೃತದೇಹವನ್ನು ಕಾಲುವೆಗೆ ತೇಲಿ ಬಿಟ್ಟಿರುತ್ತಾನೆ. ರಾಜುವಿನ ಮೃತದೇಹ ಕಾಲುವೆಯಲ್ಲಿ ಪತ್ತೆಯಾದ ನಂತರ ಪೊಲೀಸರು ತನಿಖೆ ಮಾಡಿ ಐದು ಜನರನ್ನು ಬಂಧಿಸಿದ್ದಾರೆ.
ಫೋನ್ ಕರೆಗಳ ಆಧಾರದ ಮೇಲೆ ಚೇಲಾನನ್ನು ಮೊದಲು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ನಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನ ಹೆಂಡತಿಯ ಜೊತೆ ಆತ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.
Comments are closed.