ಗುವಾಹಟಿ: ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಗೋಮಾಂಸದ ಬದಲು ಬೇರೆ ಪ್ರಾಣಿಗಳ ಮಾಂಸವನ್ನು ಯಾಕೆ ಕೊಡಬಾರದು? ಕಡವೆ ಮಾಂಸ ನೀಡಬಹುದು ಎಂದು ಅಸ್ಸಾಂನ ಯುವ ಬಿಜೆಪಿ ನಾಯಕ ಸತ್ಯರಂಜನ್ ಬೋರಾ ಹೇಳಿದ್ದಾರೆ.

ಈ ವಿಚಾರವಾಗಿ ಸತ್ಯರಂಜನ್ ಬೋರಾ ಹಾಗೂ ಬೆಂಬಲಿಗರು ಆಗ್ರಹಿಸಿದ್ದು, ಗುವಾಹಟಿಯಲ್ಲಿರುವ ಮೃಗಾಲಯಗಳಿಗೆ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.

ಗೋವನ್ನು ಹಿಂದೂಗಳು ಆರಾಧಿಸುತ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಆಹಾರವಾಗಿ ನೀಡುವ ಸಲುವಾಗಿ ಆಗುವ ಗೋಹತ್ಯೆ ನಿಲ್ಲಬೇಕು. ಅಲ್ಲಿಯವರೆಗೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಈ ಸಂದರ್ಭ ಪ್ರತಿಭಟನಾಕಾರರನ್ನು ಚದುರಿಸಿದ ಮೃಗಾಲಯದ ಅಧಿಕಾರಿಗಳು ಮೃಗಾಲಯದ ಪ್ರಾಣಿಗಳಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಆಹಾರ ನೀಡಲಾಗುತ್ತಿದ್ದು, ನಿಮ್ಮ ಬೇಡಿಕೆಯ ಬಗ್ಗೆ ಕೇಂದ್ರ ಪ್ರಾಧಿಕಾರ ಅಧಿಕಾರಿಗಳ ಬಳಿ ಮಾತನಾಡಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಭಾಗೀಯ ಅರಣ್ಯಾಧಿಕಾರಿ ತೇಜಸ್ ಮರಿಸ್ವಾಮಿ ಅವರು, ಕಡವೆ ಕೂಡ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವ ಪ್ರಾಣಿಯಾಗಿದ್ದು, ಅದನ್ನು ಕೊಲ್ಲುವ ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
(ಸಾಂದರ್ಭಿಕ ಚಿತ್ರಗಳು)
Comments are closed.