ಚಂಡೀಗಢ: ನೂತನ ಕೃಷಿ ಮಸೂದೆಗೆ ವಿರೋಧಿಸಿ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ನಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅವರು ಚಂಡೀಗಢ ಪ್ರವೇಶ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮನ್ನು ಬಂಧಿಸಲಾಗಿದೆ. ಅವರು ನಮ್ಮನ್ನು ಧ್ವನಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕೌರ್ ಟ್ವೀಟ್ ಮಾಡಿದ್ದಾರೆ. ಕೃಷಿಕರ ಹಕ್ಕಿನ ಕುರಿತು ಮಾತನಾಡಿದ್ದಕ್ಕೆ ನಮ್ಮನ್ನು ಬಂಧಿಸಲಾಗುತ್ತಿದೆ. ಆದರೆ, ನಾವು ಸತ್ಯವನ್ನು ಅನುಸರಿಸುತ್ತೇವೆ.ನಮ್ಮ ಧ್ವನಿಯನ್ನು ಬಲಪ್ರಯೋಗದ ಮೂಲಕ ಧಮನ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ನೂತನ ಕೃಷಿ ಮಸೂದೆ ವಿರೋಧಿಸಿ ಅಕಾಲಿದಳ ಇಂದು ಕಿಸಾನ್ ಮಾರ್ಚ್ ಎಂಬ ಹೆಸರಿನಲ್ಲಿ ಮೂರು ಮೆರವಣಿಗೆ ನಡೆಸಿತ್ತು. ಅಕಾಲಿದಳ ಮುಖ್ಯಸ್ಥ ಸುಖ್ಭೀರ್ ಸಿಂಗ್ ಬಾದಲ್ ನೇತೃತ್ವದ ತಂಡ ಅಮೃತ್ಸರದಿಂದ ಈ ಮೆರವಣಿಗೆ ಆರಂಭಿಸಿತು. ಎರಡನೇ ಮೆರವಣಿಗೆಯನ್ನು, ಅಮೃತ್ಸರದಿಂದ ಹರ್ಸೀಮ್ರತ್ ಕೌರ್ ನಡೆಸಿದರೆ ಮೂರನೇ ಮೆರವಣಿಗೆ ನೇತೃತ್ವವನ್ನು ಪ್ರೇಮ್ ಸಿಂಗ್ ವಹಿಸಿದ್ದರು. ವಿವಿಧ ಸ್ಥಳಗಳಿಂದ ಆರಂಭವಾದ ಈ ಮಸೂದೆ ಚಂಡೀಗಢದಲ್ಲಿ ಸೇರಬೇಕಿತ್ತು. ಬಳಿಕ ಮೂವರು ನಾಯಕರು ಪಂಜಾಬ್ ರಾಜ್ಯಪಾಲರಿಗೆ ಕೃಷಿ ಮಸೂದೆ ವಿರೋಧಿಸಿ ಪತ್ರ ನೀಡಲು ತೀರ್ಮಾನಿಸಿದ್ದರು.ಇದನ್ನೂ ಓದಿ : ಹಬ್ಬದ ಸೀಸನ್ನಲ್ಲಿ 200 ಹೆಚ್ಚುವರಿ ರೈಲುಗಳಿಗೆ ಚಾಲನೆ ಸಾಧ್ಯತೆ
ಈ ವೇಳೆ ಹರ್ಸಿಮ್ರತ್ ಕೌರ್ ಬಾದಲ್ ಅವರನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ಹಳೆ ಮೈತ್ರಿ ಪಕ್ಷವಾಗಿದ್ದ ಅಕಾಲಿದಳ ಕೃಷಿ ಮಸೂದೆ ವಿರೋಧಿಸಿ, ಎನ್ಡಿಎ ಒಕ್ಕೂಟ ತೊರೆದು ಬಂದಿದೆ.
ಈ ಕೃಷಿ ಮಸೂದೆ ಪಂಜಾಬ್ನಲ್ಲಿ ತೀವ್ರವಿರೋಧ ವ್ಯಕ್ತವಾಗಿದೆ. ಈ ಮಸೂಧೆ ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಅಂತ್ಯಗೊಳಿಸುತ್ತದೆ. ಖಾಸಗಿ ಕರ್ಪೊರೇಟರ್ ಪರವಾಗಿ ಈ ಮಸೂದೆ ಇದೆ ಎಂಬ ಆರೋಪ ಮಾಡಿದೆ.
Comments are closed.