ಚಂಡಿಗಢ: ಭಾರತೀಯ ಸೇನಾ ಸಿಬ್ಬಂದಿಯೊಬ್ಬರು ಪಾಕ್ ಗುಪ್ತಚರ ಸಂಸ್ಥೆಯ ಹನಿಟ್ರ್ಯಾಪ್ ಜಾಲಕ್ಕೆ ಬಲಿಯಾಗಿ ಭಾರತೀಯ ಸೇನೆಯ ಗೌಪ್ಯ ಮಾಹಿತಿಯನ್ನು ರವಾನಿಸಿದ್ದಾರೆ.
ಈ ಸಂಬಂಧ ಆರೋಪಿ ಮಹೇಶ್ ಕುಮಾರ್ ಅವರನ್ನು ರೇವಾರಿಯಲ್ಲಿನ ನಿವಾಸದಿಂದ ಹರಿಯಾಣ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಮಹೇಶ್ ಗೌಪ್ಯ ಮಾಹಿತಿಯನ್ನು ಪಾಕ್ಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಲಖನೌನಲ್ಲಿನ ಮಿಲಿಟರಿ ಇಂಟಲಿಜೆನ್ಸ್ಗೆ ಭಾರತದಿಂದ ಪಾಕ್ಗೆ ಮಾಹಿತಿ ರವಾನೆಯಾಗುತ್ತಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮಹೇಶ್ ಮೇಲೆ ನಿಗಾ ಇರಿಸಲಾಗಿತ್ತು.
ಹಲವು ವರ್ಷಗಳಿಂದ ಮಾಹಿತಿ ವರ್ಗಾಯಿಸಿ ದೊಡ್ಡ ಮೊತ್ತದ ಹಣವನ್ನು ಪಾಕ್ನಿಂದ ಈತ ಪಡೆದಿದ್ದಾನೆ ಎನ್ನಲಾಗಿದೆ. ದೇಶದೊಳಗೆ ಒಳನುಸುಳುವ ಉಗ್ರರನ್ನು ನೇರವಾಗಿ ಯಮಲೋಕಕ್ಕೆ ಭಾರತೀಯ ಸೇನೆ ಅಟ್ಟುತ್ತಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಅದರ ಗುಪ್ತಚರ ಇಲಾಖೆ ಕಂಗಾಲಾಗಿದೆ. ಈ ಹಿನ್ನೆಲೆ ಇದೀಗ ಹನಿ ಟ್ರ್ಯಾಪ್ನಂತಹ ಕಳ್ಳ ದಾರಿ ಮೂಲಕ ಭಾರತದಿಂದ ಮಾಹಿತಿ ಕಲೆ ಹಾಕುವ ಯತ್ನಕ್ಕೆ ಮುಂದಾಗಿದೆ. ಇದನ್ನು ಭಾರತದ ಗುಪ್ತಚರ ಇಲಾಖೆ ಯಶಸ್ವಿಯಾಗಲು ಬಿಡುತ್ತಿಲ್ಲ.
Comments are closed.