ನವದೆಹಲಿ: ಅಳಿಯನಾಗಬೇಕಿದ್ದ ವ್ಯಕ್ತಿಯೊಬ್ಬನಿಗೆ ಕರೆ ಮಾಡಿ ತನ್ನ ಮನೆಗೆ ಕರೆಯಿಸಿಕೊಂಡ ಮಹಿಳೆ ಆತ ಬಂದ ಕೂಡಲೇ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಮದನ್ಪುರ್ ಖಾದರ್ ಏರಿಯಾದಲ್ಲಿರುವ ತನ್ನ ಮನೆಗೆ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಅಲೋಕ್ ಕುಮಾರ್ ಎಂಬಾತನನ್ನು ಮಹಿಳೆ ಕರೆಸಿಕೊಂಡಿದ್ದಳು. ಮೊಬೈಲ್ ಕಿತ್ತುಕೊಂಡು ಓಡಿ ಹೋಗಿರುವ ಮಹಿಳೆಯ ವಿರುದ್ಧ ಅಲೋಕ್ ಇದೀಗ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಆರೋಪಿ ಉಷಾ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನನ್ನ ಮಗಳ ಜತೆ ದೂರುದಾರ ಅಲೋಕ್ ಕುಮಾರ್ ಮದುವೆ ನಿಶ್ಚಯವಾಗಿತ್ತು. ಆದರೆ, ಕೆಲವು ವಿವಾದಗಳ ಬೆನ್ನಲ್ಲೇ ಸಂಬಂಧ ಮುರಿದುಬಿತ್ತು. ಆದರೂ ತನ್ನ ಮಗಳ ಫೋಟೋಗಳು ಅಲೋಕ್ ಕುಮಾರ್ ಮೊಬೈಲ್ನಲ್ಲಿ ಇದ್ದವು. ಅವುಗಳನ್ನು ಡಿಲೀಟ್ ಮಾಡುವುದಕ್ಕಾಗಿ ಮೊಬೈಲ್ ಕಿತ್ತುಕೊಂಡೆ ಎಂದಿದ್ದಾರೆ.
ಉಷಾ ವಿಚಾರಣೆ ಬೆನ್ನಲ್ಲೇ ಅಲೋಕ್ ಕುಮಾರ್ ವಿಚಾರಣೆಯು ನಡೆಯಿತು. ಈ ವೇಳೆ ಉಷಾ ಅವರು ಹೇಳಿದ್ದು ಸರಿ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
Comments are closed.