ರಾಷ್ಟ್ರೀಯ

ಪಂಜಾಬ್ ಪ್ರದೇಶಕ್ಕೆ ಒಳನುಸುಳಿದ್ದ ಐವರನ್ನು ಕೊಂದುಹಾಕಿದ ಗಡಿಭದ್ರತಾ ಪಡೆಯ ಸೈನಿಕರು

Pinterest LinkedIn Tumblr

ನವದೆಹಲಿ: ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ಪಂಜಾಬ್ ಪ್ರದೇಶಕ್ಕೆ ಒಳನುಸುಳಿದ್ದ ಐವರು ವ್ಯಕ್ತಿಗಳನ್ನ ಭಾರತದ ಗಡಿಭದ್ರತಾ ಪಡೆಯ ಸೈನಿಕರು ಕೊಂದುಹಾಕಿದ್ದಾರೆ. ಹಿರಿಯ ಸೇನಾಧಿಕಾರಿಯೊಬ್ಬರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಡಿನ ದಾಳಿ ಎಸಗಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಅವರನ್ನು ಸಾಯಿಸಲಾಯಿತು ಎಂದು ಬಿಎಸ್​ಎಫ್ ಅಧಿಕಾರಿ ತಿಳಿಸಿದ್ಧಾರೆ.

“ಪಂಜಾಬ್​ನ ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡ ಬಂದ ನಂತರ 103ನೇ ಬೆಟಾಲಿಯನ್ ತುಕಡಿಗಳನ್ನ ಎಚ್ಚರಿಸಲಾಯಿತು. ಅವರನ್ನ ನಿಲ್ಲಿಸಲು ಹೇಳಿದಾಗ ಆ ವ್ಯಕ್ತಿಗಳು ಬಿಎಸ್​ಎಫ್ ತುಕಡಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಆಗ ಆ ಐವರು ವ್ಯಕ್ತಿಗಳು ಸಾವನ್ನಪ್ಪಿದರು” ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ನ ಸೇನಾಧಿಕಾರಿ ವಿವರ ನೀಡಿದ್ದಾರೆ.

ಬೆಳಗ್ಗಿನ 4:45ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಈಗ ಈ ಪ್ರದೇಶಾದ್ಯಂತ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಪಂಜಾಬ್ ಪ್ರಾಂತ್ಯದ ಗಡಿ ಆಚೆ ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯ ಇದೆ.

Comments are closed.