ರಾಷ್ಟ್ರೀಯ

8 ಪೊಲೀಸರ ಹಂತಕ ರೌಡಿ ವಿಕಾಸ್‌ ದುಬೆ ಬಂಧನ!

Pinterest LinkedIn Tumblr


ಉಜ್ಜಯಿನಿ: ಕಳೆದ ಎರಡು ದಿನಗಳಿಂದ ಪೊಲೀಸರಿಗೆ ಚಳ್ಳು ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ, ಮೋಸ್ಟ್‌ ವಾಂಟೆಡ್‌ ರೌಡಿ ವಿಕಾಸ್‌ ದುಬೆಯನ್ನ ಪೊಲೀಸರು ಬಂಧಿಸಿದ್ದಾರೆ. ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಪೊಲೀಸರು ದುಬೆಯನ್ನ ಅರೆಸ್ಟ್‌ ಮಾಡಿದ್ದಾರೆ. ಕಾನ್ಪುರಲ್ಲಿ ನಡೆದ ಪೊಲೀಸ್‌ ಹಾಗೂ ರೌಡಿಗಳ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ದುಬೆ 8 ಪೊಲೀಸರನ್ನ ಕೊಂದಿದ್ದ.

ಸಿಕ್ಕಿದ್ದು ಹೇಗೆ?
ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಇರುವ ಮಹಾಕಾಳ ದೇವಾಸ್ಥಾನಕ್ಕೆ ವಿಕಾಸ್‌ ದುಬೆ ಇಂದು ಮುಂಜಾನೆ ತೆರಳಿದ್ದಾನೆ. ಸದ್ಯ ದೇವಾಲಯ ಮುಂಗಡವಾಗಿ ಬುಕ್ಕಿಂಗ್‌ ಮಾಡಿದವರಿಗೆ ದರ್ಶನದ ವ್ಯವಸ್ಥೆ ಕಲ್ಪಿಸುತ್ತಿದೆ. ದುಬೆ ಕೂಡ ಬುಕ್ಕಿಂಗ್‌ ಮಾಡಿಕೊಂಡು ದೇವರ ದರ್ಶನ ಪಡೆದಿದ್ದಾನೆ ಎನ್ನಲಾಗಿದೆ. ನಂತರ ನಾನು ವಕಾಸ್‌ ದುಬೆ ಎಂದು ಜೋರಾಗಿ ಅರಚಿಕೊಂಡು ಹೇಳಿದ್ದಾನೆ. ಕೂಡಲೇ ದೇವಾಲಯದ ರಕ್ಷಣ ಸಿಬ್ಬಂದಿಗಳು ಆತನನ್ನ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಕ್ಷಣ ಯುಪಿ ಪೊಲೀಸರಿಗೆ ಮಧ್ಯಪ್ರದೇಶ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯುಪಿ ಪೊಲೀಸರು ದುಬೆಯನ್ನ ಕರೆದುಕೊಂಡು ಹಗಿದ್ದಾರೆ.

Comments are closed.