ರಾಷ್ಟ್ರೀಯ

ಕೊರೋನಾ ಪರಿಣಾಮ ಮೇ ತಿಂಗಳುಗಳಲ್ಲಿ ಗೋಚರಿಸುತ್ತದೆ: ಮೋದಿ

Pinterest LinkedIn Tumblr


ನವದೆಹಲಿ: ಲಾಕ್‌ಡೌನ್ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಕಳೆದ ಒಂದೂವರೆ ತಿಂಗಳುಗಳಲ್ಲಿ ದೇಶವು ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಹೇಳಿದ್ದಾರೆ.

ನಮ್ಮ ಗುರಿ ಬೇಗ ಪ್ರತಿಕ್ರಿಯಿಸುವುದಾಗಿರಬೇಕು. ‘ಎರಡು ಅಡಿ ಅಂತರ’ ಎಂಬ ಮಂತ್ರವನ್ನು ಅನುಸರಿಸಬೇಕು. ಕೆಂಪು ವಲಯಗಳನ್ನು ಹಳದಿ ಮತ್ತು ಹಸಿರು ವಲಯಗಳಾಗಿ ಪರಿವರ್ತಿಸಲು ರಾಜ್ಯಗಳು ಪ್ರಯತ್ನಿಸಬೇಕು. ಈ ಸಂದರ್ಭದಲ್ಲಿ ನಾವು ಧೈರ್ಯಶಾಲಿಯಾಗಿರಬೇಕು. ಸಾಮಾನ್ಯ ನಾಗರಿಕರ ಜೀವನವನ್ನು ಮುಟ್ಟುವ ಸುಧಾರಣೆಗಳನ್ನು ತರಬೇಕು. ಆರ್ಥಿಕತೆಗೆ ಪ್ರಾಮುಖ್ಯತೆ ನೀಡಬೇಕು. ಜತೆಗೆ ಕೊರೋನಾ ವಿರುದ್ಧದ ಹೋರಾಟ ಮುಂದುವರಿಸಬೇಕು ಎಂದು ಪ್ರಧಾನಿ ಮೋದಿ ಧೈರ್ಯ ತುಂಬಿದರು.

ಕೊರೋನಾ ಪರಿಣಾಮ ಮುಂದಿನ ತಿಂಗಳುಗಳಲ್ಲಿ ಗೋಚರಿಸುತ್ತದೆ. ಮಾಸ್ಕ್​ಗಳು ಮುಂದೆ ನಮ್ಮ ಜೀವನದ ಭಾಗವಾಗುತ್ತವೆ. ಹಲವು ಮುಖ್ಯಮಂತ್ರಿಗಳು ಅಭಿಪ್ರಾಯ ನೀಡಿದ್ದಾರೆ. ಆರ್ಥಿಕ ಸವಾಲುಗಳನ್ನು ಎದುರಿಸಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆರೋಗ್ಯ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ಸೂಚಿಸಿದ್ದಾರೆ ಎಂದು ಹೇಳಿದರು.

Comments are closed.