
ತಿರುವನಂತಪುರಂ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗಿ ತಲ್ಲಣ ಸೃಷ್ಟಿಸುತ್ತಿರುವ ಸಂದರ್ಭದಲ್ಲಿಯೇ ಮಹಾಮಾರಿಯ ಮತ್ತೊಂದು ಮುಖ ವೈದ್ಯರಲ್ಲಿಆತಂಕ ಮೂಡಿಸಿದೆ. ಕೊರೊನಾ ಸೋಂಕಿತರಲ್ಲಿ ರೋಗದ ಲಕ್ಷಣಗಳೇ ಗೋಚರಿಸುತ್ತಿಲ್ಲ. ಆದರೆ ದೇಹದಲ್ಲಿ ವೈರಾಣು ಇರುವುದು ಮಾತ್ರ ಖಾತ್ರಿಯಾಗುತ್ತಿದೆ!
ಹೌದು, ಕೇರಳದ ಪತ್ಥನಂತಿಟ್ಟ ಜಿಲ್ಲೆಯಲ್ಲಿ ದುಬೈನಿಂದ ಮರಳಿದ 60 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅದರಂತೆ ಮಾರ್ಚ್ 19 ರಿಂದ ಏ. 6ರವರೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಆದರೆ ಇಷ್ಟೂ ದಿನಗಳವರೆಗೆ ಸೋಂಕಿತನಲ್ಲಿ ಯಾವುದೇ ಲಕ್ಷಣಗಳು ಗೋಚರವಾಗಲಿಲ್ಲ.
ಕೆಮ್ಮು, ಸೀನುವಿಕೆ, ಜ್ವರದ ಲಕ್ಷಣಗಳೇ ಗೋಚರಿಸಲಿಲ್ಲ. ಬದಲಾಗಿ ರಕ್ತದ ಪರೀಕ್ಷೆ ಮಾಡಿದಾಗಲೆಲ್ಲ ವೈರಾಣು ಇರುವುದು ಖಾತ್ರಿ ಮಾತ್ರ ಆಗುತ್ತಿತ್ತು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಲಕ್ಷಣ ರಹಿತ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಕೂಡ ಪತ್ತೆ ಮಾಡುವುದು ಕಷ್ಟವಾಗುತ್ತದೆ.
ದಿಲ್ಲಿಯಿಂದ ಮಾರ್ಚ್ 15ರಂದು ರೈಲಿನಲ್ಲಿ ಎರ್ನಾಕುಲಂಗೆ ಆಗಮಿಸಿದ್ದ 19 ವರ್ಷದ ಸೋಂಕಿತೆಗೆ ಕೂಡ ಕೊರೊನಾ ಲಕ್ಷಣಗಳು ಕಾಣಿಸಿಲ್ಲ, ಆದರೆ ರಕ್ತ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
Comments are closed.