ರಾಷ್ಟ್ರೀಯ

ಮಂಗಳಮುಖಿಯರ ಕ್ರೂರ ವರ್ತನೆಗೆ ಮಗು ಬಲಿ

Pinterest LinkedIn Tumblr


ಜಾರಗ್ರಾಮ: ಮಂಗಳಮುಖಿಯರ ಮೃಗೀಯ ವರ್ತನೆಗೆ ಹಸುಗೂಸು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಪಶ್ಚಿಮ ಬಂಗಾಲದಲ್ಲಿ ಸಂಭವಿಸಿದೆ. ಪ್ರಾಣಾಪಾಯದಲ್ಲಿದ್ದ ಮಗುವನ್ನು ಇಲ್ಲಿನ ಆಸ್ಪತ್ರೆಗೆ ಸೇರಿಸಿ 20 ದಿನಗಳ ಕಾಲ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲಾಗಿತ್ತು.

ಬಿಡುಗಡೆಯಾಗಿ ಮನೆ ಸೇರುತ್ತಿದ್ದಂತೆ ಮೂವರು ಮಂಗಳಮುಖಿಯರು ಆಗಮಿಸಿ, ತಾಯಿಯ ಮಡಿಲಿನಲ್ಲಿದ್ದ ಮಗುವನ್ನು ಕಿತ್ತುಕೊಂಡು 11 ಸಾವಿರ ರೂ. ನೀಡುವಂತೆ ಬೆದರಿಸಿದ್ದಾರೆ. ಅಲ್ಲದೇ ಆ ಮಗುವನ್ನು ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಈ ವೇಳೆ, ಮಗು ಪ್ರಜ್ಞೆ ತಪ್ಪಿ, ಅಸ್ವಸ್ಥಗೊಂಡಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೇ ಮಗು ಮೃತಪಟ್ಟಿದೆ.

Comments are closed.