ಅಸ್ಸಾಂ : ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ ಒಸಮಾ ಬಿನ್ ಲಾಡೆನ್ ಮೃತಪಟ್ಟಿದ್ದಾನೆ.
ಈ ಒಸಮಾ ಬಿನ್ ಲಾಡೆನ್ ಒಂದು ಕಾಡಾನೆ. ಅಲ್ಲಿನ ಜನರನ್ನು ರಾಕ್ಷಸ ರೀತಿಯಲ್ಲಿ ಕಾಡಿದ್ದ. ಬೆಳೆ ನಾಶ, ಜನರ ಮೇಲೆ ದಾಳಿ ನಡೆಸಿದ್ದ. ಈ ಉಪಟಳ ತಾಳಲಾರದ ಅಲ್ಲಿನ ಮಂದಿ ಕಾಡಾನೆಗೆ ಅಲ್ ಕೈದಾ ಉಗ್ರಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಹೆಸರನ್ನು ಇಟ್ಟಿದ್ದರು.
ಬಳಿಕ ನ.11ರಂದು ರಂಗ್ಜುಲಿ ಅರಣ್ಯ ವಿಭಾಗದ ಸಿಬ್ಬಂದಿ ಮದಗಜವನ್ನು ಶಾಂತಗೊಳಿಸಿ ಸೆರೆ ಹಿಡಿದಿದ್ದರು. ಹಾಗೇ ನ.12ರಂದು ಆನೆಯನ್ನು ಆರಂಜ್ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ಲಾಡೆನ್ ಹೆಸರನ್ನು ಬದಲಿಸಿ, ಕೃಷ್ಣಾ ಎಂದು ನಾಮಕರಣ ಮಾಡಲಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಬಿಡಲು ಯೋಚಿಸಿದ್ದರು. ಆದರೆ ಸ್ಥಳೀಯ ಜನರು ಪ್ರತಿಭಟನೆ ಮಾಡಿದ್ದರಿಂದ ಸೆರೆಯಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದರು. ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿರಲಿಲ್ಲ. ಪೋಸ್ಟ್ಮಾರ್ಟಂ ಬಳಿಕವಷ್ಟೇ ಆನೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಸೂಟಿಯಾ ವಿಧಾನಸಭಾ ಕ್ಷೇತ್ರದ ಶಾಸಕ ಪದ್ಮಾ ಹಝರಿಕಾ ನೇತೃತ್ವದ ಪಶುವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ತಂಡ ಕಾಡಾನೆಯನ್ನು ಪಳಗಿಸಿ, ಸೆರೆ ಹಿಡಿದಿತ್ತು
Comments are closed.