ರಾಷ್ಟ್ರೀಯ

92ನೇ ವಯಸ್ಸಿನಲ್ಲೂ ರಾಮ್‌ಲಲ್ಲಾ ಪರ ವಾದಿಸಿದ ಪರಾಶರನ್‌

Pinterest LinkedIn Tumblr


ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರ ವಿವಾದ ಕುರಿತು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ಕೊಟ್ಟಿದೆ.

ಆದರೆ ಈ ತೀರ್ಪು ಎಲ್ಲರಿಗೂ ಒಪ್ಪಿತವಾಗುವ ರೀತಿಯಲ್ಲಿ ಹಾಗೂ ಸರ್ವಾನುಮತವಾಗಿರಬೇಕೆಂದು ಪಂಚ ಸದಸ್ಯರ ನ್ಯಾಯಪೀಠ ಹಲವು ಪ್ರಯತ್ನ ಮಾಡಿತ್ತು.

ಇದಕ್ಕೆ ಪೂರಕ ಎಂಬಂತೆ ಅರ್ಜಿದಾರರ ಪರ ವಕೀಲರು ಕೂಡ ವಾದ-ಪ್ರತಿವಾದ ಮಂಡಿಸಿದ್ದು ನ್ಯಾಯಮೂರ್ತಿಗಳಿಗೆ ನೆರವಾಗಿದೆ. ಈ ವಕೀಲರ ಪೈಕಿ ಒಬ್ಬರು ಈಗ ಹೀರೋ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರು ಈಗ ವೈರಲ್‌ ಆಗಿದೆ.

ಅವರೇ ರಾಮ ಮಂದಿರ ಭೂವಿವಾದಲ್ಲಿ ರಾಮ ಲಲ್ಲಾ ವಿರಾಜಮಾನ್‌ ದಾವೆದಾರರ ಪರ ವಾದ ಮಂಡಿಸಿದ 92 ವರ್ಷದ ಕೆ. ಪರಾಶರನ್‌.

ಭೂ ವಿವಾದ ತಾರ್ಕಿಕ ಅಂತ್ಯ ಕಾಣಬೇಕೆನ್ನುವುದೇ ನನ್ನ ಜೀವನದ ಕೊನೆಯ ಆಸೆ ಎಂದು ಪರಾಶರನ್‌ ಆಪ್ತರ ಬಳಿ ಹೇಳಿಕೊಂಡಿದ್ದರು

ಕೋರ್ಟ್‌ನಲ್ಲಿಪ್ರಕರಣ ಸಂಬಂಧ ವಾದ ಮಂಡನೆಯಲ್ಲಿಪರಾಶರನ್‌ ಅವರು ವೇದಗಳನ್ನು, ಪುರಾಣಗಳನ್ನು ಕೂಡ ಉಲ್ಲೇಖಿಸಿ ಗಮನ ಸೆಳೆದಿದ್ದರು. ಪರಾಶರನ್‌ ಅಗಾಧ ಜ್ಞಾಪಕ ಶಕ್ತಿ ನ್ಯಾಯಮೂರ್ತಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಇಳಿವಯಸ್ಸಿನಲ್ಲೂ ಪರಾಶರನ್‌ ನಡೆಸಿದ ವಾದ ನ್ಯಾಯಮೂರ್ತಿಗಳಿಗೆ ಸ್ಪಷ್ಟ ಚಿತ್ರಣ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ಮದ್ರಾಸ್‌ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಶಲ್‌ ಅವರು ಪರಾಶರನ್‌ ಅವರನ್ನು ಮೆಚ್ಚಿ , ಭಾರತೀಯ ಕಾನೂನಿನ ಪಿತಾಮಹ ಎಂದು ಕರೆದಿದ್ದರಂತೆ. ಧಾರ್ಮಿಕ ವಿಚಾರಗಳಲ್ಲಿಅಗಾಧ ಪಾಂಡಿತ್ಯ ಹೊಂದಿರುವ ಪರಾಶರನ್‌ ಅವರ ಇಳಿವಯಸ್ಸಿನ ಹುಮ್ಮಸ್ಸು ಕಂಡು ವಕೀಲರ ವಲಯ ನಿಬ್ಬೆರಗಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಅಯೋಧ್ಯೆ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ರಾಮ್‌ಲಲ್ಲಾ ಪರವಾಗಿ ಪರಾಶರನ್‌ ನಿರಂತರ ವಾದ ಮಂಡಿಸುತ್ತಿದ್ದರು.

40 ದಿನಗಳ ಕಾಲ ಎದ್ದು ನಿಂತೇ ಪರಾಶರನ್‌ ವಾದಿ ಮಂಡಿಸುತ್ತಿದ್ದರು. ಆದರೆ ನ್ಯಾಯಮೂರ್ತಿಗಳು ಇಳಿವಯಸ್ಸನ್ನು ಇಳಿವಯಸ್ಸನ್ನು ಪರಿಗಣಿಸಿ ಕುಳಿತೇ ವಾದ ಮಾಡಲು ಸಿಜೆಐ ಸುಪ್ರೀಂಕೋರ್ಟ್‌ನಲ್ಲಿಅವಕಾಶ ನೀಡಿದಾಗ ಪರಾಶರನ್‌ ಪ್ರತಿಕ್ರಿಯೆ ನೀಡಿದ್ದು ಮೆಚ್ಚುಗೆಗೆ ಅರ್ಹವಾಗಿದೆ.

ನಿಮ್ಮ ಕಾಳಜಿಗೆ ಧನ್ಯವಾದ. ಆದರೆ ನ್ಯಾಯಾಂಗದ ಸಂಪ್ರದಾಯದಂತೆ ಎದ್ದು ನಿಂತು ವಾದ ಮಂಡಿಸುವುದು ಸರಿಯಾದ ರೀತಿ. ನಾನು ಸಂಪ್ರದಾಯದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿ ಹೊಂದಿರುವವನು ಎಂದಿದ್ದರು.

ಪರಾಶರನ್‌ ಪ್ರವರ

ಜನನ: 9 ಅಕ್ಟೋಬರ್‌ 1927, ಶ್ರೀರಂಗಂ
1958 ರಲ್ಲಿ ವಕೀಲ ವೃತ್ತಿ ಆರಂಭ
1976ರಲ್ಲಿ ತಮಿಳುನಾಡು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ ಅಡ್ವೊಕೇಟ್‌ ಜನರಲ್‌ ಆಗಿ ಸೇವೆ.
1983 -89ರವರೆಗೆ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಣೆ.
60 ದಶಕಗಳ ನ್ಯಾಯಾಂಗ ಅನುಭವ.
2003ರಲ್ಲಿ ಪದ್ಮಭೂಷಣ, 2011ರಲ್ಲಿ ಪದ್ಮವಿಭೂಷಣ ಪುರಸ್ಕೃತರಾದರು.
2012-18ರವರೆಗೆ ರಾಜ್ಯಸಭಾ ಸದಸ್ಯರು, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಪರವೂ ವಕೀಲಿಕೆ.
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಪ್ರಕರಣದಲ್ಲಿ ನಾಯರ್‌ ಸೊಸೈಟಿ ಪರ ವಾದ.

Comments are closed.