ರಾಷ್ಟ್ರೀಯ

ಹೆಂಡತಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಗಂಡ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರಪ್ರದೇಶದ ಅಚುತಪುರಂನಲ್ಲಿ ನಡೆದಿದೆ.

ವೀರ ಬಾಬು(22) ಆತ್ಮಹತ್ಯೆ ಮಾಡಿಕೊಂಡ ಪತಿ. ಅಚುತಪುರಂ ನಿವಾಸಿಯಾಗಿರುವ ವೀರ ನಾಲ್ಕು ತಿಂಗಳ ಹಿಂದೆ ಗೊಲ್ಲಾಪ್ರೊಲು ನಿವಾಸಿ ಸತ್ಯವೇಣಿಯನ್ನು ಮದುವೆ ಆಗಿದ್ದನು. ಮದುವೆಯಾದ ನಂತರ ಸತ್ಯವೇಣಿ ಪದೇ ಪದೇ ತನ್ನ ತವರು ಮನೆಗೆ ಹೋಗುತ್ತಿದ್ದಳು.

ದೀಪಾವಳಿ ಹಬ್ಬಕ್ಕೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಅಕ್ಟೋಬರ್ 16ರಂದು ವೀರ ಗೊಲ್ಲಾಪ್ರೊಲುಗೆ ತೆರಳಿದ್ದನು. ಈ ವೇಳೆ ಸತ್ಯವೇಣಿ ಪತಿ ಜೊತೆ ಹೋಗಲು ನಿರಾಕರಿಸುತ್ತಾಳೆ. ಅಲ್ಲದೆ ಆಕೆಯ ಮನೆಯವರು ಕೂಡ ಆಕೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಪತ್ನಿ ಸತ್ಯವೇಣಿ ಹಾಗೂ ಆಕೆಯ ಮನೆಯವರ ನಿರ್ಧಾರದಿಂದ ವೀರ ಬೇಸರಗೊಂಡಿದ್ದನು. ಅಲ್ಲದೆ ಗೊಲ್ಲಾಪ್ರೊಲುನಿಂದ ಅಚುತಪುರಂನಲ್ಲಿ ಇರುವ ತನ್ನ ಮನೆಗೆ ಹಿಂತಿರುಗುತ್ತಿದ್ದಂತೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ವೀರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Comments are closed.