ರಾಷ್ಟ್ರೀಯ

ಗಂಡನ ಹತ್ಯೆಯ ನಂತರ, ಶವವನ್ನು ತುಂಡರಿಸಿ ರಸ್ತೆಯುದ್ದಕ್ಕೂ ಎಸೆದಿದ್ದ ಹೆಂಡತಿ! 8 ವರ್ಷಗಳ ಬಳಿಕ ಬಯಲಾಯ್ತು ರಹಸ್ಯ!

Pinterest LinkedIn Tumblr


ಹೊಸದಿಲ್ಲಿ: 8 ವರ್ಷಗಳ ಹಿಂದೆ ನಡೆದಿದ್ದ ಬರ್ಬರ ಕೊಲೆಯೊಂದು ಅಚ್ಚರಿಯ ರೀತಿಯಲ್ಲಿ ಬಯಲಾದ ಪ್ರಸಂಗ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ತನಿಖೆಯ ದಾರಿ ತಪ್ಪಿಸುವ ಸಲುವಾಗಿ ಹತ್ಯೆಗೈದ ಬಳಿಕ ಶವವನ್ನು ತುಂಡು ತುಂಡು ಮಾಡಿ ರಸ್ತೆಯುದ್ಧಕ್ಕೂ ಎಸೆದಿದ್ದ ಕಿರಾತಕರ ಪ್ಲಾನ್ ಕೇಳಿ ಪೊಲೀಸರೇ ದಂಗುಬಡಿದುಹೋಗಿದ್ದಾರೆ.

ಏನಿದು ಪ್ರಕರಣ?

ಈ ಘಟನೆ ನಡೆದಿದ್ದು 2011ರಲ್ಲಿ. ರವಿ ಎಂಬಾತನ ಜೊತೆ ಶಕುಂತಲಾ ಎಂಬುವರ ವಿವಾಹ ನಿಶ್ಚಯವಾಗಿತ್ತು. ಆದ್ರೆ, ಕಮಲ್ ಎಂಬಾತನನ್ನು ಶಕುಂತಲಾ ಪ್ರೀತಿಸುತ್ತಿದ್ದರು. ಮನೆಯವರ ಒತ್ತಡಕ್ಕೆ ರವಿಯನ್ನು ವಿವಾಹವಾದ ಬಳಿಕವೂ, ಶಕುಂತಲಾ ಹಾಗೂ ಕಮಲ್ ಪರಸ್ಪರ ಸೇರುತ್ತಿದ್ದರು. ಈ ವೇಳೆ, ರವಿಯನ್ನು ಹತ್ಯೆಗೈಯ್ಯುವ ಮಾಸ್ಟರ್ ಪ್ಲಾನ್ ಮಾಡಿದ್ರು.

ತನ್ನ ತಂಗಿಯ ಮನೆಗೆ ಹೋಗಬೇಕು ಎಂದು ಪತಿಯನ್ನ ಪುಸಲಾಯಿಸಿ ಕರೆಸಿಕೊಂಡ ಶಕುಂತಲಾ, 70 ಸಾವಿರ ರೂಪಾಯಿ ವೆಚ್ಚ ಮಾಡಿ ವಾಹನವೊಂದನ್ನೂ ರೆಡಿ ಮಾಡಿಟ್ಟಿಕೊಂಡಿದ್ದಳು. ಏನೋ ಒಂದು ಕಾರಣ ಹೇಳಿ ಕಮಲ್ ಕೂಡಾ ವಾಹನ ಹತ್ತಿಕೊಂಡ. ರಸ್ತೆಯಲ್ಲಿ ಹೋಗುವಾಗಲೇ ತನ್ನ ಪತಿ ರವಿಯನ್ನು ಶಕುಂತಲಾ ಹತ್ಯೆಗೈದಳು. ಆಕೆಗೆ ಪ್ರಿಯಕರ ಕಮಲ್ ಕೂಡಾ ನೆರವಾಗಿದ್ದ. ಈ ಕೃತ್ಯದ ಬಗ್ಗೆ ಅರಿವಿದ್ದ ವಾಹನ ಚಾಲಕ ಕೂಡಾ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಗುಂಡಿಯಲ್ಲಿ ರವಿಯ ಪಾರ್ಥಿವ ಶರೀರವನ್ನು ಹಾಕಿದ ಶಕುಂತಲಾ ಹಾಗೂ ಕಮಲ್, ಬೆಂಕಿ ಇಟ್ಟು ಸುಟ್ಟರು. ಬಳಿಕ ತನಿಖೆ ವೇಳೆ ಪೊಲೀಸರಿಗೆ ದಿಕ್ಕು ತಪ್ಪಿಸಲು ರವಿ ದೇಹವನ್ನು ತುಂಡು ತುಂಡು ಮಾಡಿ ಅಲ್ವಾರ್ ಹಾಗೂ ರೇವಾರಿ ನಡುವೆ ದಾರಿಯುದ್ಧಕ್ಕೂ ಒಂದೊಂದು ತುಂಡುಗಳನ್ನು ಎಸೆದು ಹೋಗಿದ್ದರು.

ತನಿಖೆ ತಾರ್ಕಿಕ ಅಂತ್ಯಕ್ಕೆ ಬರದ ಕಾರಣ, ಪ್ರಕರಣವನ್ನು ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು. ಘಟನೆ ನಡೆದು 8 ವರ್ಷಗಳೇ ಕಳೆದುಹೋಗಿದ್ದವು. ಕಮಲ್ ಹಾಗೂ ಶಕುಂತಲಾ ಸಾಮಾನ್ಯರಂತೆ ದಿನ ಕಳೆಯುತ್ತಾ ಆರಾಮಾಗಿದ್ದರು. ಆದ್ರೆ, ಮೃತ ರವಿಯ ಪತ್ನಿ ಶಕುಂತಲಾ ಹಾಗೂ ಕಮಲ್ ಮೇಲೆಯೇ ಅನುಮಾನ ಪಟ್ಟ ಪೊಲೀಸರು 2017ರಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಿದರು. ಆಗ ಬಯಲಾಯ್ತು ಇವರಿಬ್ಬರ ಕರ್ಮಕಾಂಡ.

ಸದ್ಯ ಕಮಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದ್ರೆ, ಶಕುಂತಲಾ ತಲೆಮರೆಸಿಕೊಂಡಿದ್ದಾಳೆ. ಗರ್ಭಿಣಿಯಾಗಿರುವ ಶಕುಂತಲಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.