ಹೈದರಾಬಾದ್: ಕಂದಾಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ತೆಲಂಗಾಣದ ರೈತನೊಬ್ಬ ತಾನೇ ಗುಂಡಿ ತೋಡಿಕೊಂಡು ಜೀವಂತ ಸಮಾಧಿಯಾಗಲು ಯತ್ನಿಸಿದ ಘಟನೆ ಮಹಬೂಬ್ಬಾದ್ ಜಿಲ್ಲೆಯ ರಾಮಣ್ಣಗುಡೆಮ್ ಮಂಡಲದಲ್ಲಿ ನಡೆದಿದೆ.
ಸುಧಾಕರ್ ರೆಡ್ಡಿ, ತನ್ನ 5 ಎಕರೆ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪತ್ತೇದಾರ್ ಪಾಸ್ಬುಕ್” ದಾಖಲೆಯನ್ನು ನೀಡಲು ಕಂದಾಯ ಅಧಿಕಾರಿಗಳು ನಿರಾಕರಿಸಿದಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಈ ರೈತ ಹಾಗೂ ಸಹೋದರರರಿಗೆ ಜಿಲ್ಲೆಯ ರಾಮಣ್ಣಗುಡೆಮ್ ಮಂಡಲದಲ್ಲಿ 15 ಎಕರೆ ಭೂಮಿ ಇದೆ. ರಾಜಕೀಯ ನಾಯಕರೊಬ್ಬರ ಕಾರಣದಿಂದ ಭೂಮಿ ಖಾತಾ ಪುಸ್ತಕವನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಕಾರಣದಿಂದ ಬೇಸತ್ತು ಸಮಾಧಿಯಾಗಲು ಹೊರಟಿದ್ದ.
ಅರ್ಧ ಸಮಾಧಿಯಾಗಿದ್ದ ರೈತನನ್ನು ಅಲ್ಲಿನ ಗ್ರಾಮಸ್ಥರೇ ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸರ್ಕಾರ ತನಿಖೆಗೆ ಆದೇಶಿಸಿದೆ.
ಇತ್ತೀಚಿನ ತಿಂಗಳಲ್ಲಿ ಕಂದಾಯ ಅಧಿಕಾರಿಗಳು ಲಂಚ ನೀಡದ ಕಾರಣಕ್ಕೆ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ರೈತರು ಆರೋಪಿಸಿರುವ ಸಾಕಷ್ಟು ಪ್ರಕರಣಗಳು ತೆಲಂಗಾಣದಲ್ಲಿ ವರದಿಯಾಗಿವೆ. ರೈತನೊಬ್ಬ ದಾಖಲೆಗಾಗಿ ತಹಸೀಲ್ದಾರ್ ಕಾಲಿಗೆ ಬಿದ್ದ ವಿಡಿಯೋ ಇತ್ತೀಚೆಗಷ್ಟೆ ವೈರಲ್ ಆಗಿತ್ತು.
Comments are closed.