ರಾಷ್ಟ್ರೀಯ

ರೈತನೊಬ್ಬ ತಾನೇ ಗುಂಡಿ ತೋಡಿಕೊಂಡು ಜೀವಂತ ಸಮಾಧಿಯಾಗಲು ಯತ್ನ!

Pinterest LinkedIn Tumblr


ಹೈದರಾಬಾದ್​: ಕಂದಾಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ತೆಲಂಗಾಣದ ರೈತನೊಬ್ಬ ತಾನೇ ಗುಂಡಿ ತೋಡಿಕೊಂಡು ಜೀವಂತ ಸಮಾಧಿಯಾಗಲು ಯತ್ನಿಸಿದ ಘಟನೆ ಮಹಬೂಬ್​ಬಾದ್​ ಜಿಲ್ಲೆಯ ರಾಮಣ್ಣಗುಡೆಮ್​ ಮಂಡಲದಲ್ಲಿ ನಡೆದಿದೆ.

ಸುಧಾಕರ್​ ರೆಡ್ಡಿ, ತನ್ನ 5 ಎಕರೆ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪತ್ತೇದಾರ್​ ಪಾಸ್​ಬುಕ್​” ದಾಖಲೆಯನ್ನು ನೀಡಲು ಕಂದಾಯ ಅಧಿಕಾರಿಗಳು ನಿರಾಕರಿಸಿದಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಈ ರೈತ ಹಾಗೂ ಸಹೋದರರರಿಗೆ ಜಿಲ್ಲೆಯ ರಾಮಣ್ಣಗುಡೆಮ್​ ಮಂಡಲದಲ್ಲಿ 15 ಎಕರೆ ಭೂಮಿ ಇದೆ. ರಾಜಕೀಯ ನಾಯಕರೊಬ್ಬರ ಕಾರಣದಿಂದ ಭೂಮಿ ಖಾತಾ ಪುಸ್ತಕವನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಕಾರಣದಿಂದ ಬೇಸತ್ತು ಸಮಾಧಿಯಾಗಲು ಹೊರಟಿದ್ದ.

ಅರ್ಧ ಸಮಾಧಿಯಾಗಿದ್ದ ರೈತನನ್ನು ಅಲ್ಲಿನ ಗ್ರಾಮಸ್ಥರೇ ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಸರ್ಕಾರ ತನಿಖೆಗೆ ಆದೇಶಿಸಿದೆ.

ಇತ್ತೀಚಿನ ತಿಂಗಳಲ್ಲಿ ಕಂದಾಯ ಅಧಿಕಾರಿಗಳು ಲಂಚ ನೀಡದ ಕಾರಣಕ್ಕೆ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ರೈತರು ಆರೋಪಿಸಿರುವ ಸಾಕಷ್ಟು ಪ್ರಕರಣಗಳು ತೆಲಂಗಾಣದಲ್ಲಿ ವರದಿಯಾಗಿವೆ. ರೈತನೊಬ್ಬ ದಾಖಲೆಗಾಗಿ ತಹಸೀಲ್ದಾರ್​ ಕಾಲಿಗೆ ಬಿದ್ದ ವಿಡಿಯೋ ಇತ್ತೀಚೆಗಷ್ಟೆ ವೈರಲ್​ ಆಗಿತ್ತು.

Comments are closed.