ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಭಾರತ ನಲುಗಿ ಹೋಗಿದ್ದು, ಉತ್ತರ ಪ್ರದೇಶ ಒಂದರಲ್ಲೇ 50 ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ.
ಉತ್ತರ ಪ್ರದೇಶ, ಬಿಹಾರ್, ಉತ್ತರಾಖಂಡ್, ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಿಹಾರ್ ನ ರಾಜಧಾನಿ ಪಾಟ್ನಾ ಮತ್ತು ಸುತ್ತಮುತ್ತಲು ಜಲಾವೃತವಾಗಿದೆ. ಕಳೆದ ಶುಕ್ರವಾರದಿಂದಲೂ ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಸಚಿವ ನಂದ ಕಿಶೋರ್ ಅವರ ನಿವಾಸದ ಸುತ್ತಲೂ ನೀರು ನಿಂತಿದ್ದ, ದ್ವೀಪದಂತಾಗಿದೆ.
ಉತ್ತರಾಖಂಡ್ ನಲ್ಲೂ ಭಾರಿ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಕೂಡಾ ನಷ್ಟಕ್ಕೆ ಕಾರಣವಾಗಿದೆ. ಪಂಜಾಬ್ ಮೂಲ್ ಆರು ಯಾತ್ರಿಕರು ತೆಹ್ರಿ ಜಿಲ್ಲೆಯಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ಮೃತರಾಗಿದ್ದಾರೆ.
Comments are closed.