ರಾಷ್ಟ್ರೀಯ

ದಲಿತ ವ್ಯಕ್ತಿಯ ಶವವನ್ನು ತಮ್ಮ ಹೊಲಗಳ ಮೂಲಕ ಕೊಂಡೊಯ್ಯಲು ನಿರಾಕರಿಸಿದ ಸವರ್ಣೀಯರು; ಕೊನೆಗೆ ಶವವನ್ನು ಏನು ಮಾಡಿದ್ರು ಗೊತ್ತಾ..? ಮನಕಲಕುವ ವೀಡಿಯೊ ವೈರಲ್

Pinterest LinkedIn Tumblr

ವೆಲ್ಲೂರ್: ಅಪಘಾತದಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೊಬ್ಬರ ಶವವನ್ನು ಸೇತುವೆಯ ಮೇಲಿನಿಂದ ಕೆಳಕ್ಕೆ ಇಳಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtu.be/VSH7Gb6dXKc

ತಮಿಳುನಾಡಿನ ವೆಲ್ಲೂರ್ ಜಿಲ್ಲೆಯ ವಾಣಿಯಂಬಾಡಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿಈ ಆಘಾತಕಾರಿ ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ದಲಿತ ಎಂಬ ಕಾರಣಕ್ಕಾಗಿ ಈ ಗ್ರಾಮದ ಸವರ್ಣೀಯರು ಆತನ ಶವವನ್ನು ತಮ್ಮ ಹೊಲಗಳ ಮೂಲಕ ಹಾದು ಸ್ಮಶಾನಕ್ಕೆ ಕೊಂಡೊಯ್ಯಲು ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ, ಎತ್ತರದ ಸೇತುವೆ ಮೇಲಿಂದ ಶವವನ್ನು ಕೆಳಗಿಳಿಸಿ ಕಷ್ಟಪಟ್ಟು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ದಲಿತರ ಈ ಸಾಹಸವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ವೈರಲ್​ ಆಗಿದೆ.

ಕಳೆದ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಾಣಿಯಂಬಾಡಿ ನಿವಾಸಿ ಕುಪ್ಪನ್​ (50) ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಶನಿವಾರ ಶವವನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಿದ್ದರು. ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ಅದರಂತೆ ಶವವನ್ನು ವಾಣಿಯಂಬಾಡಿಯ ಪಾಲಾರ್​ ನದಿ ತಟದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿತ್ತು.

ರುದ್ರಭೂಮಿಗೆ ಸಾಗುವ ಹಾದಿಯ ಅಕ್ಕಪಕ್ಕ ಜಮೀನುಗಳನ್ನು ಮೇಲ್ಚಾತಿಯವರು ಖರೀದಿಸಿದ್ದರಿಂದ ಆ ಹಾದಿಯಲ್ಲಿ ದಲಿತರ ಶವ ಸಾಗಿಸಲು ಅನುಮತಿ ನೀಡಿಲ್ಲ. ಇದರಿಂದ ದಲಿತರು ಅನಿವಾರ್ಯವಾಗಿ ಶವವನ್ನು ಸೇತುವೆ ಮೇಲಿಂದ ಕೆಳಕ್ಕಿಳಿಸಿ ಸ್ಮಶಾನಕ್ಕೆ ಒಯ್ಯುತ್ತಾರೆ.

ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

Comments are closed.