ರಾಷ್ಟ್ರೀಯ

ಲಾಡ್ಜ್‌ನಲ್ಲಿ ಪ್ರಿಯತಮೆಯನ್ನು ಹತ್ಯೆ ಮಾಡಿ ಬಳಿಕ ತಾನು ನೇಣಿಗೆ ಶರಣಾದ ವ್ಯಕ್ತಿ !

Pinterest LinkedIn Tumblr

ಥಾಣೆ: ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು ಹತ್ಯೆ ಮಾಡಿದ ಬಳಿಕ ತಾನು ನೇಣು ಬಿಗಿದುಕೊಂಡಿರುವ ಘಟನೆ ಕಲ್ಯಾಣ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಇಬ್ಬರ ಮೃತದೇಹಗಳನ್ನು ಶುಕ್ರವಾರ ರಾತ್ರಿ ವಶಪಡಿಸಿಕೊಳ್ಳಲಾಗಿದ್ದು, ಕಲ್ಯಾಣ್‌ ರೈಲ್ವೆ ಸ್ಟೇಷನ್‌ ಬಳಿಯಿರುವ ಲಾಡ್ಜ್‌ನಲ್ಲಿ ಘಟನೆ ನಡೆದಿದೆ.

ಇಬ್ಬರು ಸಂತ್ರಸ್ತರು ಸುಮಾರು 20 ವರ್ಷದವರಾಗಿದ್ದಾರೆ. ಅರುಣ್‌ ಗುಪ್ತಾ ಮತ್ತು ಪ್ರತಿಭಾ ಪ್ರಸಾದ್‌ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಬಳಿಕ ತಾನು ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಹಾತ್ಮ ಫುಲೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಪಿ ಆರ್‌ ಲೋಂಧೆ ತಿಳಿಸಿದ್ದಾರೆ.

ಆತ ಉತ್ತರ ಪ್ರದೇಶದ ಅಜಮ್‌ಗಢದವನಾಗಿದ್ದರೆ, ಮುಂಬೈನ ಘಾಟ್‌ಕೋಪರ್‌ ನಿವಾಸಿಯಾಗಿದ್ದ ಯುವತಿಯು ಉತ್ತರಪ್ರದೇಶದಲ್ಲಿ ವಾಸವಿದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಿಂದಾಗಿಯೇ ಘಟನೆ ಸಂಭವಿಸಿದೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.