ರಾಷ್ಟ್ರೀಯ

ಇನ್ನೇನು ದಫನ ಮಾಡಬೇಕೆನ್ನುವಷ್ಟರಲ್ಲಿ ಸತ್ತ ವ್ಯಕ್ತಿ ಜೀವಗೊಂಡ ! ಅಷ್ಟಕ್ಕೂ ಅಲ್ಲಿ ಆಗಿದ್ದೇನು..?

Pinterest LinkedIn Tumblr

ಉತ್ತರ ಪ್ರದೇಶ: ದೇವರ ಹುಂಡಿಗೆ ಹೋದ ಹಣ ಮಸಾಣಕ್ಕೆ ಹೋದ ಹೆಣ ಎರಡು ಯಾವತ್ತೂ ವಾಪಸ್​ ಬರಲ್ಲ ಅನ್ನೋ ಮಾತಿದೆ. ಆದ್ರೆ ಲಕ್ನೋದಲ್ಲಿ ಒಬ್ಬ ಯುವಕನನ್ನ ಡಾಕ್ಟರ್​ಗಳೇ ಸತ್ತಿದ್ದಾನೆ ಅಂತಾ ಕನ್​ಫರ್ಮ್​ ಮಾಡಿದ ಮೇಲೆ ಹೂಳೋದಕ್ಕೆ ಮಸಣಕ್ಕೆ ತೆಗೆದುಕೊಂಡು ಹೋಗಿ, ಹೂಳುವ ವೇಳೆ ಆತ ಎಚ್ಚರಗೊಂಡಿದ್ದಾನೆ. ಇದೇ ತಿಂಗಳ 2 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಲಕ್ನೋದಲ್ಲಿ ಕಳೆದ ಜೂನ್​ 21 ರಂದು 20 ವರ್ಷದ ಮೊಹಮದ್​ ಫಾರ್ಖಾನ್​ ಎಂಬಾತ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಮಾದಲ್ಲಿದ್ದ ಆತನ ಚಿಕಿತ್ಸೆಗಾಗಿ 7 ಲಕ್ಷವನ್ನೂ ಖರ್ಚು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸತ್ತಿದ್ದಾನೆ ಅಂತಾ ಡಾಕ್ಟರ್​ಗಳೇ ದೃಢಪಡಿಸಿದ್ದಾರೆ.

ಇದ್ರಿಂದ ನೊಂದ ಕುಟುಂಬಸ್ಥರು ಆ್ಯಂಬುಲೆನ್ಸ್​ನಲ್ಲಿ ಶವವನ್ನ ಆಸ್ಪತ್ರೆಯಿಂದ ಮೆನೆಗೆ ತಂದು ಅಂತಿಮ ದರ್ಶನದ ಬಳಿಕ ಮಸಣಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಅಂತಿಮ ಕಾರ್ಯಗಳನ್ನೆಲ್ಲಾ ಮುಗಿಸಿ ಹೂಳಲು ಗುಂಡಿಯೊಳಗೆ ಶವವನ್ನ ಇಡಬೇಕು ಎನ್ನುವಷ್ಟರಲ್ಲಿ ಶವದ ಕೈಕಾಲುಗಳ ಚಲನವಲನ ಕಂಡ ಕುಟುಂಬಸ್ಥರೊಬ್ಬರು ಗಮನಿಸಿದ್ದಾರೆ. ಆಗ ಯುವಕ ಫಾರ್ಖಾನ್​ ಇನ್ನೂ ಬದುಕಿದ್ದಾನೆ ಎಂಬುದು ಗೊತ್ತಾಗಿ ತಕ್ಷಣವೇ ಆತನನ್ನ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಯುವಕ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

Comments are closed.