ರಾಷ್ಟ್ರೀಯ

ಮೋದಿ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕಾಗಿ ಅಸಮಾಧಾನ ಹೊರಹಾಕಿದ ಸುಬ್ರಮಣಿಯನ್‌ ಸ್ವಾಮಿ

Pinterest LinkedIn Tumblr

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ 2ನೇ ಬಾರಿಗೆ ಸರಕಾರ ರಚನೆ ಮಾಡಿದ್ದು, ಪಿಎಂ ಸೇರಿ 58 ಮಂದಿಯ ಕ್ಯಾಬಿನೆಟ್‌ ರಚನೆಯಾಗಿದ್ದು ಅಚ್ಚರಿ ಎಂಬಂತೆ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಸಂಪುಟದಿಂದ ಹೊರಗೆ ಉಳಿದಿದ್ದಾರೆ.

ಮೋದಿ ಸಂಪುಟ ಸೇರುವ ಭಾರಿ ನಿರೀಕ್ಷೆಯಲ್ಲಿದ್ದ ಸುಬ್ರಮಣಿಯನ್‌ ಸ್ವಾಮಿ ಈ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ನಿರಾಶೆಯನ್ನು ಹೊರಹಾಕಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಮುನ್ಸೂಚನೆ ಸಿಕ್ಕುತ್ತಿದ್ದಂತೆ ಟ್ವೀಟ್‌ ಮಾಡಿದ್ದ ಸ್ವಾಮಿ, ಚೌಕಿದಾರ್‌ ಬದಲು ಮಜ್ದೂರ್‌ (ಕಾರ್ಮಿಕ) ಎಂದು ಹೆಸರಿನ ಮುಂದೆ ಸೇರಿಸಿಕೊಳ್ಳಬೇಕಿತ್ತು. ಎಲ್ಲ ಹಂತಗಳಲ್ಲು ಹೋರಾಟ ನಡೆಸಿ ಪಕ್ಷವನ್ನು ಬಹುಮಾಳಿಗೆಯ ಬಿಲ್ಡಿಂಗ್‌ಆಗಿ ರೂಪಿಸಿದ್ದೇನೆ. ಆದರೆ ಅದರಲ್ಲಿ ನನಗೆ ಐಶಾರಾಮಿ ಅಪಾರ್ಟ್‌ಮೆಂಟ್‌ ಸಿಗಲಿಲ್ಲ. ಯುದ್ಧದ ನಂತರ ಭಗವಾನ್‌ ಕೃಷ್ಣ ಅರ್ಜುನನಿಗೆ ಕಾರಣ ವಿವರಿಸಿದ ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದರು.

ಅದಾದ ನಂತರ ಸ್ವಾಮಿ ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ಟ್ವೀಟ್‌ಗಳನ್ನು ರೀಟ್ವೀಟ್‌ ಮಾಡಿಕೊಂಡಿದ್ದಾರೆ. ಹಲವರು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ವಿತ್ತ ಖಾತೆ ಸಿಗಬೇಕಿತ್ತು ಎಂದು ಹೇಳಿದ್ದಾರೆ. ಮೋದಿ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಹಲವರು ನಿರಾಶೆ ವ್ಯಕ್ತ ಪಡಿಸಿದ್ದಾರೆ.

ವಿತ್ತ ಸಚಿವರನ್ನಾಗಿ ಮಾಡದ ಹಿನ್ನೆಲೆ ಹಿತೈಷಿಗಳು ವ್ಯಕ್ತ ಪಡಿಸಿದ ನಿರಾಶೆಯ ಭಾವನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ, ನಾನು ಗೀತೆ ಮೇಲೆ ನಂಬಿಕೆ ಇರಿಸಿದ್ದೇನೆ. ಹಾಗಾಗಿ ಅಂತಹ ನಿರಾಕರಣೆಗಳಿಂದ ನನ್ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನನ್ನ ಹಲವು ನಿರಾಶೆಗಳ ಅನುಭವ ಮುಂದಿನ ಯಶಸ್ಸಿಗೆ ಕಾರಣವಾಗಲಿದೆ ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

Comments are closed.