ರಾಷ್ಟ್ರೀಯ

ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚುನಾವಣಾ ಗಣಿತದ ವಿರುದ್ಧ ಕೆಮಿಸ್ಟ್ರಿ ಮೇಲುಗೈ ಸಾಧಿಸಿದೆ:  ನರೇಂದ್ರ ಮೋದಿ

Pinterest LinkedIn Tumblr

ವಾರಾಣಸಿ: ಹಾಲಿ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚುನಾವಣಾ ಗಣಿತದ ವಿರುದ್ಧ ಕೆಮಿಸ್ಟ್ರಿ ಮೇಲುಗೈ ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೇ.27 ರಂದು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಲು ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಅಂಕಗಣಿತಕ್ಕಿಂತವನ್ನೂ ಮೀರಿ ಕೆಮಿಸ್ಟ್ರಿಯೊಂದಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಒಪ್ಪಿಕೊಳ್ಳಬೇಕೆಂದು ಮೋದಿ ಹೇಳಿದ್ದಾರೆ.

ದೇಶಕ್ಕೆ ನಾನು ಪ್ರಧಾನಿಯಾಗಿರಬಹುದು, ಆದರೆ ನಿಮಗೆ ನಾನು ಸೇವಕ, ನಿಮ್ಮ ಸಂಸದ ಎಂದು ಮೋದಿ ಹೇಳಿದ್ದಾರೆ. ಕೆಲಸ ಹಾಗೂ ಕೆಲಸ ಮಾಡುವವರು ಅದ್ಭುತಗಳನ್ನು ಸೃಷ್ಟಿಸುತ್ತಾರೆ ಎಂದು ಮೋದಿ ತಮ್ಮ ವಿಜಯದ ಕೀರ್ತಿಯನ್ನು ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೂ ತಾನು ಕೃತಜ್ಞರಾಗಿನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Comments are closed.