ರಾಷ್ಟ್ರೀಯ

ಪುಲ್ವಾಮಾ ಉಗ್ರ ದಾಳಿ ಸಂದರ್ಭ ಬಿರ್ಯಾನಿ ತಿಂದು ಮಲಗಿಕೊಂಡಿದ್ದೀರಾ?: ಮೋದಿಗೆ ಅಸಾದುದ್ದೀನ್ ಓವೈಸಿ

Pinterest LinkedIn Tumblr


ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಉಲ್ವಾಮಾದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಸಂದರ್ಭದಲ್ಲಿ ಹೊಟ್ಟೆ ತುಂಬಾ ಬಿರ್ಯಾನಿ ತಿಂದು ಕೊರಕೆ ಹೊಡೆಯುತ್ತಿದ್ರಾ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ನೀವು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಳಿತಾಗ, ನಮ್ಮ ಕಣ್ಣೆದುರೇ 50 ಕೆ.ಜಿ. ಆರ್‌ಡಿಎಕ್ಸ್ ಕಳ್ಳಸಾಗಣೆ ಮಾಡಲಾಗಿದೆ. ಅದು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?, ಅಥವಾ ಕಂಡು ಕಾಣದಂತಿದ್ದರೆ?, ಎಲ್ಲಿ ಮಲಗಿದ್ರಿ? ಅಥವಾ ಬಿರ್ಯಾನಿ ತಿಂದು ಕೊರಕೆ ಹೊಡೆಯುತ್ತಿದ್ರಾ? ಎಂದು ಓವೈಸಿ ಹರಿಹಾಯ್ದಿದ್ದಾರೆ.

ಪಾಕ್ ಮೇಲೆ ನಡೆದ ಏರ್ ಸ್ಟ್ರೈಕ್ ಸಂಬಂಧ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಒಂದು ಹೇಳಿಕೆ ನೀಡಿದರೆ ಭಾರತೀಯ ವಾಯು ಸೇನೆಯ ಮುಖ್ಯಸ್ಥರು ಮತ್ತೊಂದು ಹೇಳಿಕೆ ನೀಡುತ್ತಾರೆ. ಇದನ್ನೇ ಹೈದರಾಬಾದ್‌ನಲ್ಲಿ ‘ದೇಡ್‌ ಹೋಷ್ಯಾರಿ’ ಎನ್ನುತ್ತಾರೆ ಎಂದಿದ್ದಾರೆ.

ಅಮಿತ್‌ ಶಾ ಹೇಳುತ್ತಾರೆ ಬಾಲಾಕೋಟ್‌ನಲ್ಲಿ 20 ಉಗ್ರರು ಹತರಾಗಿದ್ದಾರೆ ಎಂದು. ಕೃಷಿ ಸಚಿವರು 300 ಉಗ್ರರು ಸಾವನ್ನಪ್ಪಿದ್ದಾರೆ ಎನ್ನುತ್ತಾರೆ. ಮತ್ತೊಬ್ಬರು ಹೇಳುತ್ತಾರೆ ನಮ್ಮ ಉದ್ದೇಶ ಕೊಲ್ಲುವುದಾಗಿರಲಿಲ್ಲ ಎನ್ನುತ್ತಾರೆ. ರಾಜನಾಥ್‌ ಸಿಂಗ್‌ ಅವರು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ವರದಿಯನ್ನಿಟ್ಟುಕೊಂಡು ಬಾಲಾಕೋಟ್‌ ದಾಳಿಯ ನಂತರ ಅಲ್ಲಿಂದ ಚಾಲಿತಗೊಂಡಿದ್ದ 300 ಫೋನ್‌ಗಳು ನಿಷ್ಕ್ರಿಯಗೊಂಡಿವೆ ಎಂದು ಹೇಳುತ್ತಾರೆ. ಯಾರನ್ನು ನಾವು ನಂಬುವುದು? ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲು ಬಯಸುತ್ತೇನೆ, ವಿದೇಶಾಂಗ ಸಚಿವರು ನಿದ್ರಿಸಿದ್ದಾರೆಯೇ? ಐಎಎಫ್‌ ವರದಿ ನಿಜವೇ ಅಥವಾ ನಿಮ್ಮ ಸಚಿವರುಗಳು ನೀಡುತ್ತಿರುವ ಹೇಳಿಕೆಗಳು ಸರಿಯೇ? ಎಂದು ಓವೈಸಿ ಪ್ರಶ್ನಿಸಿದ್ದಾರೆ.

Comments are closed.