ರಾಷ್ಟ್ರೀಯ

ರಾಜಸ್ಥಾನ ಪಠ್ಯಪುಸ್ತಕದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಕುರಿತು ಪಾಠ

Pinterest LinkedIn Tumblr


ಜೈಪುರ: ಪಾಕಿಸ್ತಾನದ ಎಫ್‌-16 ಯುದ್ಧವಿಮಾನವನ್ನು ಹೊಡೆದುರಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಶೌರ್ಯದ ಕುರಿತ ಪಾಠವನ್ನು ಶಾಲಾಪಠ್ಯದಲ್ಲಿ ಸೇರಿಸಲು ರಾಜಸ್ಥಾನ ಸರಕಾರ ನಿರ್ಧರಿಸಿದೆ.

ಶಿಕ್ಷಣ ಸಚಿವ ಗೋವಿಂದ ಸಿಂಗ್‌ ದೊತಾಸ್ರಾ ಅವರು ಈ ಕುರಿತು ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ”ಅಭಿನಂದನ್‌ ಅವರನ್ನು ಗೌರವಿಸಲು ಅವರ ಶೌರ್ಯದ ಕುರಿತು ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗುವುದು,” ಎಂದು ಸಿಂಗ್‌ ಹೇಳಿದ್ದಾರೆ.

ಯಾವ ತರಗತಿಯ ಪಠ್ಯದಲ್ಲಿ ಈ ವಿಷಯ ಸೇರ್ಪಡೆ ಮಾಡಲಾಗುವುದು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಕಳೆದ ಫೆಬ್ರುವರಿ 27ರಂದು ಪಾಕ್‌ ವಿಮಾನ ಹೊಡೆದುರುಳಿಸಿದ ಅಭಿನಂದನ್‌ ಅವರಿದ್ದ ಮಿಗ್‌-21 ಯುದ್ಧ ವಿಮಾನ ಪಾಕ್‌ ಆಕ್ರಮಣಕ್ಕೆ ತುತ್ತಾಗಿತ್ತು.

ಈ ವೇಳೆ ಪ್ಯಾರಾಚೂಟ್‌ನಿಂದ ಜಿಗಿದ ಅಭಿನಂದನ್‌ ಪಾಕಿಸ್ತಾನ ಪ್ರದೇಶದಲ್ಲಿ ಇಳಿದಿದ್ದರು. ಅವರನ್ನು ಮಾರ್ಚ್‌ 1ರಂದು ಪಾಕ್‌ ಸರಕಾರ ಭಾರತಕ್ಕೆ ಹಸ್ತಾಂತರಿಸಿದೆ.

Comments are closed.