ರಾಷ್ಟ್ರೀಯ

ಉಗ್ರರ ಉಪಟಳ: ಇಬ್ಬರು ಯೋಧರು, ಇಬ್ಬರು ಪೊಲೀಸರು ಹುತಾತ್ಮ

Pinterest LinkedIn Tumblr


ಶ್ರೀನಗರ: ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನದ ವಾತಾವರಣ ಇದೆ. ಇದರ ಮಧ್ಯೆ ಉಗ್ರರ ಕಿರಿಕ್ ಕಡಿಮೆಯಾಗುತ್ತಿಲ್ಲ.

ಭಾರತ ಗಡಿ ಕುಪ್ವಾರಾ ಪ್ರದೇಶದಲ್ಲಿ ಇಂದು [ಶುಕ್ರವಾರ] ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು CRPF ಯೋಧರು ಹಾಗೂ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.

ಗಡಿ ನಿಯಂತ್ರಣರೇಖೆ ಉಲ್ಲಂಘಿಸಿ ಪಾಕಿಸ್ತಾನ ಯೋಧರಿಂದ ಪದೇ-ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಮತ್ತೊಂದೆಡೆ ಉಗ್ರರು ಸಹ ಗಡಿಯಲ್ಲಿ ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಿದೆ.

ಇದ್ರಿಂದ ಭಾರತ ಸೇನೆಗೆ 2 ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಒಂದು ಕಡೆ ಪಾಕ್ ಸೇನೆ ಪುಂಡಾ ಹಾಗೂ ಮತ್ತೊಂದೆಡೆ ಉಗ್ರರನ್ನು ಸೆದೆಬಡಿಯುವುದು.

Comments are closed.