ರಾಷ್ಟ್ರೀಯ

112ಕ್ಕೆ ಕರೆ ಮಾಡಿದರೆ ಸಾಕು: ಕ್ಷಣದಲ್ಲಿ ಮಹಿಳೆಯರಿಗೆ ನೆರವು

Pinterest LinkedIn Tumblr


ಹೊಸದಿಲ್ಲಿ: ಮಹಿಳೆಯರ ಸುರಕ್ಷತೆಗೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ ಇ.ಆರ್.ಎಸ್.ಎಸ್. ಸೇರಿದಂತೆ ವಿವಿಧ ಶ್ರೇಣಿಯ ಸುರಕ್ಷತಾ ಉಪಕ್ರಮಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಚಾಲನೆ ನೀಡಿದರು.

ದೇಶದ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಾಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ ಇದರಲ್ಲಿ ಸೇರಿವೆ.

ಈ ಸೇವೆಗಳನ್ನು ಈಗಾಗಲೇ ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ನಲ್ಲಿ ಆರಂಭಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ದೇಶಾದ್ಯಂತ 112 ಸಂಖ್ಯೆಗೆ ಡಯಲ್ ಮಾಡಿ ನೆರವು ಪಡೆಬಹುದು. ಈ ವ್ಯವಸ್ಥೆಯಡಿಯಲ್ಲಿ ಎಲ್ಲ ರಾಜ್ಯಗಳೂ ಸಮರ್ಪಿತ ತುರ್ತು ಸ್ಪಂದನಾ ಕೇಂದ್ರ ಇಆರ್.ಸಿ. ಸ್ಥಾಪಿಸಬೇಕು.

112 ಅನ್ನು ಹೇಗೆ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ.

ಸ್ಮಾರ್ಟ್ ಫೋನ್ ನಲ್ಲಿ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಫೀಚರ್ ಫೋನ್ ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಆಂತಕದ ಕರೆ ಸಕ್ರಿಯವಾಗುತ್ತದೆ.

ಇ.ಆರ್.ಸಿ.ಯನ್ನು ನೇರವಾಗಿ ತುರ್ತು ಸ್ಪಂದನ ವಾಹನಗಳು ಮತ್ತು ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ, ಆ ಮೂಲಕ ಸಂತ್ರಸ್ತರಿಗೆ ತಕ್ಷಣ ನೆರವು ಒದಗಿಸಲಾಗುತ್ತದೆ. ಈ ಉಪಕ್ರಮಕ್ಕಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಒದಗಿಸಲಾಗಿದೆ.

ಕೇಂದ್ರ ಗೃಹ ಸಚಿವರು, ಇದೇ ಸಂದರ್ಭದಲ್ಲಿ ಎರಡು ಪೋರ್ಟಲ್ ಗಳಾದ ಲೈಂಗಿಕ ಅಪರಾಧಗಳ ತನಿಖೆಯ ಜಾಡು ಹಿಡಿಯುವ ವ್ಯವಸ್ಥೆ ಮತ್ತು ಸುರಕ್ಷಿತ ನಗರ ಅನುಷ್ಠಾನ ನಿಗಾ ಪೋರ್ಟಲ್ ಗೆ ಚಾಲನೆ ನೀಡಿದರು.

ರಾಜ್ಯಗಳಿಗೆ ಡಿ.ಎನ್.ಎ. ವಿಶ್ಲೇಷಣೆ ಸೌಲಭ್ಯಕ್ಕೂ ರಾಜನಾಥ್‌ಸಿಂಗ್‌ ಚಾಲನೆ ನೀಡಿದರು.

Comments are closed.