ರಾಷ್ಟ್ರೀಯ

ರೋಗಿಯೊಂದಿಗಿನ ದೈಹಿಕ ಸಂಬಂಧಕ್ಕಾಗಿ ಪತ್ನಿ ಕೊಂದು ಜೀವಂತವಾಗಿರಿಸಿದ ಹೃದಯ ತಜ್ಞ

Pinterest LinkedIn Tumblr


ಆತ ಜನರ ಹೃದಯಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ. ಅತ್ಯಂತ ಜನಪ್ರಿಯ ಹೃದಯತಜ್ಞ ಎಂದು ಹೆಸರಾದ ಡಾಕ್ಟರ್​. ಆದರೆ, ಹೆಂಡತಿ ವಿಷಯದಲ್ಲಿ ಮಾತ್ರ ಆತ ಹೃದಯವನ್ನು ಕಲ್ಲಾಗಿಸಿಕೊಂಡ. ಆಸ್ತಿ ಕೇಳಿದ ಹೆಂಡತಿಯನ್ನು ಕೊಲ್ಲಲು ಮುಂದಾಗಿದ್ದ ಆತ ಹೃದಯವನ್ನು ಕಲ್ಲಾಗಿಸಿಕೊಂಡಿದ್ದ. ಅಷ್ಟಕ್ಕೂ ಈತ ಕೊಲೆಗಾರ ಎಂಬುದನ್ನು ಪತ್ತೆ ಮಾಡಿದ್ದು ಫೇಸ್​ಬುಕ್​.

ಉತ್ತರ ಪ್ರದೇಶದ ಗೊರಾಕ್​ಪುರ್​ದ ಹೃದಯತಜ್ಞ ಧರ್ಮೇಂದ್ರ ಪ್ರದಾನ್ ಉಷಾ ಸಿಂಗ್​ ಎಂಬ ಮಹಿಳೆಯೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿದ್ದ. ಈ ವೇಳೆ 2006ರಲ್ಲಿ ಧರ್ಮೇಂದ್ರ ಪ್ರಸಾದ್​ ಬಳಿ ಚಿಕಿತ್ಸೆಗೆ ಬಂದ ರಾಜೇಶ್ವರಿ ಎಂಬ ಯುವತಿ ಜೊತೆ ದೈಹಿಕ ಸಂಬಂಧ ಹೊಂದಿದ.

ಮದುವೆ ಆಗಿಲ್ಲ ಎಂದು ರಾಜೇಶ್ವರಿಯನ್ನು ನಂಬಿಸಿದ ಧರ್ಮೇಂದ್ರ ಪ್ರದಾನ್​ ಈ ಸತ್ಯವನ್ನು ಬಹುದಿನಗಳ ಕಾಲ ಮುಚ್ಚಿಡಲು ಸಾಧ್ಯವಾಗಿಲ್ಲ. ಈ ವಿಷಯ ತಿಳಿದಾಕ್ಷಣ ರಾಜೇಶ್ವರಿ ಹೆಂಡತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದಳು.

ಅದರಂತೆ ಮೊದಲ ಹೆಂಡತಿಗೆ ಧರ್ಮೇಂದ್ರ ಪ್ರದಾನ್​ ವಿಚ್ಛೇದನ ನೀಡಿದ. ಆದರೆ, ಮೊದಲ ಹೆಂಡತಿ ಉಷಾ ತನ್ನ ಹಕ್ಕಿನ ಭಾಗವಾಗಿ ಆಸ್ತಿಯಲ್ಲಿ ಪಾಲು ನೀಡುವಂತೆ ಪೀಡಿಸಿದಳು. ಈ ಮಧ್ಯೆ ಮತ್ತೊಬ್ಬನೊಂದಿಗೆ ಉಷಾ ಸಿಂಗ್​ ಮದುವೆ ಕೂಡ ನಡೆದು ಹೋಯಿತು.

ಮೊದಲ ಹೆಂಡತಿ ಆಸ್ತಿ ಕೊಡುವಂತೆ ಕಾಟ ಹೆಚ್ಚಾದ ಹಿನ್ನಲೆ ಇದಕ್ಕೆಲ್ಲಾ ಒಂದು ಇತಿಶ್ರೀ ಹಾಡಬೇಕು ಎಂದು ನಿರ್ಧರಿಸಿದ ವೈದ್ಯ ಆಕೆಯನ್ನು ಮನೆಗೆ ಬರುವಂತೆ ಕರೆದ. ಮನೆಗೆ ಹೋದ ಹೆಂಡತಿಯನ್ನು ಯಾರಿಗೂ ತಿಳಿಯದಂತೆ ಬಾರದ ಲೋಕಕ್ಕೆ ಕಳುಹಿಸಿದ. ಈ ನಡುವೆ ಯಾರಿಗೂ ಅನುಮಾನ ಬಾರದಂತೆ ಆಕೆಯ ಫೇಸ್​ಬುಕ್​ ಅನ್ನು ಅಪ್ಡೆಟ್​​ ಕೂಡ ಮಾಡುತ್ತಿದ್ದ.

ಇತ್ತ ಉಷಾ ಸಿಂಗ್​ ಕೈಗೆ ಸಿಗದ ಹಿನ್ನಲೆ ಆಕೆಯ ಎರಡನೇ ಗಂಡ ಕೂಡ ಹುಡುಕಾಟ ನಡೆಸಿದ. ಫೇಸ್​ಬುಕ್​ನಲ್ಲಿ ಸದಾ ಆ್ಯಕ್ಟಿವ್​ ಆಗಿರುತ್ತಿದ್ದ ಆಕೆಗೆ ಅನೇಕ ಬಾರಿ ಫೇಸ್​ಬುಕ್​ ಕರೆ ಮಾಡಿದರು ಸ್ವೀಕರಿಸದ ಹಿನ್ನಲೆ ಅನುಮಾನಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

Comments are closed.