ಆತ ಜನರ ಹೃದಯಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ. ಅತ್ಯಂತ ಜನಪ್ರಿಯ ಹೃದಯತಜ್ಞ ಎಂದು ಹೆಸರಾದ ಡಾಕ್ಟರ್. ಆದರೆ, ಹೆಂಡತಿ ವಿಷಯದಲ್ಲಿ ಮಾತ್ರ ಆತ ಹೃದಯವನ್ನು ಕಲ್ಲಾಗಿಸಿಕೊಂಡ. ಆಸ್ತಿ ಕೇಳಿದ ಹೆಂಡತಿಯನ್ನು ಕೊಲ್ಲಲು ಮುಂದಾಗಿದ್ದ ಆತ ಹೃದಯವನ್ನು ಕಲ್ಲಾಗಿಸಿಕೊಂಡಿದ್ದ. ಅಷ್ಟಕ್ಕೂ ಈತ ಕೊಲೆಗಾರ ಎಂಬುದನ್ನು ಪತ್ತೆ ಮಾಡಿದ್ದು ಫೇಸ್ಬುಕ್.
ಉತ್ತರ ಪ್ರದೇಶದ ಗೊರಾಕ್ಪುರ್ದ ಹೃದಯತಜ್ಞ ಧರ್ಮೇಂದ್ರ ಪ್ರದಾನ್ ಉಷಾ ಸಿಂಗ್ ಎಂಬ ಮಹಿಳೆಯೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿದ್ದ. ಈ ವೇಳೆ 2006ರಲ್ಲಿ ಧರ್ಮೇಂದ್ರ ಪ್ರಸಾದ್ ಬಳಿ ಚಿಕಿತ್ಸೆಗೆ ಬಂದ ರಾಜೇಶ್ವರಿ ಎಂಬ ಯುವತಿ ಜೊತೆ ದೈಹಿಕ ಸಂಬಂಧ ಹೊಂದಿದ.
ಮದುವೆ ಆಗಿಲ್ಲ ಎಂದು ರಾಜೇಶ್ವರಿಯನ್ನು ನಂಬಿಸಿದ ಧರ್ಮೇಂದ್ರ ಪ್ರದಾನ್ ಈ ಸತ್ಯವನ್ನು ಬಹುದಿನಗಳ ಕಾಲ ಮುಚ್ಚಿಡಲು ಸಾಧ್ಯವಾಗಿಲ್ಲ. ಈ ವಿಷಯ ತಿಳಿದಾಕ್ಷಣ ರಾಜೇಶ್ವರಿ ಹೆಂಡತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದಳು.
ಅದರಂತೆ ಮೊದಲ ಹೆಂಡತಿಗೆ ಧರ್ಮೇಂದ್ರ ಪ್ರದಾನ್ ವಿಚ್ಛೇದನ ನೀಡಿದ. ಆದರೆ, ಮೊದಲ ಹೆಂಡತಿ ಉಷಾ ತನ್ನ ಹಕ್ಕಿನ ಭಾಗವಾಗಿ ಆಸ್ತಿಯಲ್ಲಿ ಪಾಲು ನೀಡುವಂತೆ ಪೀಡಿಸಿದಳು. ಈ ಮಧ್ಯೆ ಮತ್ತೊಬ್ಬನೊಂದಿಗೆ ಉಷಾ ಸಿಂಗ್ ಮದುವೆ ಕೂಡ ನಡೆದು ಹೋಯಿತು.
ಮೊದಲ ಹೆಂಡತಿ ಆಸ್ತಿ ಕೊಡುವಂತೆ ಕಾಟ ಹೆಚ್ಚಾದ ಹಿನ್ನಲೆ ಇದಕ್ಕೆಲ್ಲಾ ಒಂದು ಇತಿಶ್ರೀ ಹಾಡಬೇಕು ಎಂದು ನಿರ್ಧರಿಸಿದ ವೈದ್ಯ ಆಕೆಯನ್ನು ಮನೆಗೆ ಬರುವಂತೆ ಕರೆದ. ಮನೆಗೆ ಹೋದ ಹೆಂಡತಿಯನ್ನು ಯಾರಿಗೂ ತಿಳಿಯದಂತೆ ಬಾರದ ಲೋಕಕ್ಕೆ ಕಳುಹಿಸಿದ. ಈ ನಡುವೆ ಯಾರಿಗೂ ಅನುಮಾನ ಬಾರದಂತೆ ಆಕೆಯ ಫೇಸ್ಬುಕ್ ಅನ್ನು ಅಪ್ಡೆಟ್ ಕೂಡ ಮಾಡುತ್ತಿದ್ದ.
ಇತ್ತ ಉಷಾ ಸಿಂಗ್ ಕೈಗೆ ಸಿಗದ ಹಿನ್ನಲೆ ಆಕೆಯ ಎರಡನೇ ಗಂಡ ಕೂಡ ಹುಡುಕಾಟ ನಡೆಸಿದ. ಫೇಸ್ಬುಕ್ನಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಿದ್ದ ಆಕೆಗೆ ಅನೇಕ ಬಾರಿ ಫೇಸ್ಬುಕ್ ಕರೆ ಮಾಡಿದರು ಸ್ವೀಕರಿಸದ ಹಿನ್ನಲೆ ಅನುಮಾನಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
Comments are closed.