ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಲು ವ್ಯಕ್ತಿ ಮುಂದಾಗಿದ್ದು, ಆತನನ್ನು ಬಂಧಿಸಲಾಗಿದೆ.
ದೆಹಲಿಯ ಸೆಕ್ರೆಟರಿಯೆಟರ್ನಲ್ಲಿದ್ದ ಅವರ ಕಚೇರಿಗೆ ಖಾರದ ಪುಡಿ ಸಮೇತವಾಗಿ ಆಗಮಿಸಿದ ವ್ಯಕ್ತಿ ಊಟದ ಸಮಯದಲ್ಲಿ ಅವರು ಕೊಠಡಿಯಿಂದ ಹೊರಬರುತ್ತಿದ್ದಂತೆ ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ . ತಕ್ಷಣಕ್ಕೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಅನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕಾಗಿ ಆತ ಈ ಕಾರ್ಯ ಮಾಡಿದ್ದಾನೆ ಎಂದು ತಿಳಿದುಬಂದಿಲ್ಲ.
ಕೇಜ್ರಿವಾಲ್ ಕನ್ನಡಕ ಇದ್ದಿದ್ದರಿಂದ ಅವರ ಕಣ್ಣುಗಳಿಗೆ ಹೆಚ್ಚಿನ ಹಾನಿಯಾಗಿದೆ. ಆತನನ್ನು ತಳ್ಳುವಾಗ ಕನ್ನಡಕ ನೆಲಕ್ಕೆ ಬಿದ್ದು ಹೊಡೆದಿದೆ. ಈ ವೇಳೆ ಆರೋಪಿಯನ್ನು ಸೆಕ್ಯೂರಿಟಿ ಗಾರ್ಡ್ ಹಿಡಿದಿದ್ದಾರೆ.
ಈ ಘಟನೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದ್ದು, ಇದು ಭದ್ರತಾ ವೈಫಲ್ಯವಾಗಿದ್ದು, ದೆಹಲಿ ಸಿಎಂ ಕಚೇರಿ ಕೂಡ ಸುರಕ್ಷಿತವಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ಮುಖಕ್ಕೆ ಈ ಮುಂಚೆ ಕೂಡ ಮಸಿ ಬಳಿಯುವ ಯತ್ನ ನಡೆಸಲಾಗಿತು. ಹಾಗೂ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದರು.
ಈ ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಸಲು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ 4.30ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದಾರೆ.
Comments are closed.